UN NETWORKS
ಮುಡಿಪು: ಡಿಸೆಂಬರ್ 6ರಿಂದ 8ರತನಕ ನಡೆಯಲಿರುವ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕೋತ್ಸವದ ಹೊರೆ ಕಾಣಿಕೆ ಮೆರವಣಿಗೆ ಭಾನುವಾರ ನಡೆಯಿತು.
ಒಲವಿನ ಹಳ್ಳಿ ಪುನರ್ವಸತಿ ಕೇಂದ್ರದ ವಂ.ಫಾ.ಲಾರೆನ್ಸ್ ಡಿಸೋಜ ಬಲಿಪೂಜೆಯ ನೇತೃತ್ವ ವಹಿಸಿದ್ದರು. ವಂ.ಫಾ.ಮೈಕಲ್ ಮಸ್ಕರೇನಸ್, ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಮಾರ್ಸೆಲ್ ಡಿಸೋಜ, ಅರುಣ್ ಡಿಸೋಜ ಮುಡಿಪು ಇನ್ನಿತರರು ಉಪಸ್ಥಿತರಿದ್ದರು.
ಭಾರೀ ಪ್ರಮಾಣದಲ್ಲಿ ಹೊರೆ ಕಾಣಿಕೆ
ವಾರ್ಷಿಕೋತ್ಸವ ಪ್ರಯುಕ್ತ ನಡೆದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕೃಷಿ ಉತ್ಪನ್ನಗಳು ಭಾರೀ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳು ಕಂಡು ಬಂದವು. ಅಡಿಕೆ, ಬಾಳೆಹಣ್ಣು, ಅಕ್ಕಿ, ಕುಂಬಳಕಾಯಿ, ಸಿಯಾಳ ಸಹಿತ ಸಾಕಷ್ಟು ವಸ್ತುಗಳಿದ್ದವು.ಅಲ್ಲದೆ ಆಡು, ಕೋಳಿ, ಮೊಲವನ್ನೂ ಭಕ್ತರು ಹರಕೆ ರೂಪದಲ್ಲಿ ನೀಡಿದರು.