UN NETWORKS
ಕೊಲ್ಯ: ಭಾರತೀಯ ವೇದ, ಶಾಸ್ತ್ರ, ದರ್ಶನ, ಪುರಾಣ ಇತ್ಯಾದಿ ಮಾನವ ಜೀವನದ ಅನೇಕ ಉತ್ಕೃಷ್ಟ ಮೌಲ್ಯಗಳನ್ನು ಅಧಿಕೃತವಾಗಿ ತಿಳಿಸುತ್ತವೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅವುಗಳಿಗೆ ಮಾನ್ಯತೆಯಿದೆ. ಆದರೆ ಇಂದಿನ ಶಿಕ್ಷಣ ಕ್ರಮದಲ್ಲಿ ಅವುಗಳ ಸ್ಥಾನ ಲುಪ್ತವಾಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಪುರಾಣ ಕಾವ್ಯಗಳ ಮರು ಓದು ಅಗತ್ಯ’ ಎಂದು ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಬಳಿಕ ಕುಮಾರವ್ಯಾಸ ಭಾರತದ ‘ಅಕ್ಷಯ ಪಾತ್ರೆ’ ಕಥಾನಕದ ಪುರಾಣ ಪ್ರವಚನ ಜರಗಿತು. ಹಿರಿಯ ವಕೀಲ ಹಾಗೂ ಹರಿದಾಸ ಮಹಾಬಲ ಶೆಟ್ಟಿ ಕೂಡ್ಲು ಕಾವ್ಯ ವಾಚನ ಮಾಡಿದರು. ಪ್ರವಚನಕಾರ ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದರು. ದೇವಳದ ಟ್ರಸ್ಟಿ ಮಧುಸೂದನ ಅಯ್ಯರ್ ವಂದಿಸಿದರು.