UN NETWORKS
ಉಳ್ಳಾಲ: ಅಪರಿಚಿತ ನಾಲ್ವರ ತಂಡ ವಿದ್ಯಾರ್ಥಿಗೆ ರೇಸರ್ ಮೂಲಕ ಕುತ್ತಿಗೆ ಮತ್ತು ಭುಜದ ಭಾಗಕ್ಕೆ ಇರಿದಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ.
ಅದರಂತೆ ತಾನೂ ಮಂಗಳೂರಿನಲ್ಲಿ ಇರುವುದಾಗಿ ಶ್ರೇಯಸ್ ತಿಳಿಸಿದ್ದರು. ಶುಕ್ರವಾರ ಮಧ್ಯಾಹ್ನ ಶ್ರೇಯಸ್ ನನ್ನು ಅಪರಿಚಿತ ತಂಡ ಸೋಮೇಶ್ವರದಲ್ಲಿ ಭೇಟಿಯಾಗುವಂತೆ ತಿಳಿಸಿತ್ತು. ಅದರಂತೆ ಶ್ರೇಯಸ್ ತನ್ನ ಗೆಳೆಯರಾದ ಜಾನ್ಸನ್, ಹರಿಪ್ರಸಾದ್ ಮತ್ತಿಬ್ಬರ ಜತೆಗೆ ಸೇರಿಕೊಂಡು ಸೋಮೇಶ್ವರದ ಸಮುದ್ರ ತೀರದತ್ತ ತೆರಳಿದ್ದರು. ಅಲ್ಲಿ ಐದು ಮಂದಿ ತಂಡ ಇದ್ದು, ಅದರಲ್ಲಿ ಓರ್ವ ಶ್ರೇಯಸ್ ಕುತ್ತಿಗೆ ಮತ್ತು ಭುಜದ ಭಾಗಕ್ಕೆ ರೇಸರ್ ಮೂಲಕ ಇರಿದು ಪರಾರಿಯಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.