UN NETWORKS
ಉಳ್ಳಾಲ : ಚಂಡಮಾರುತದ ಪ್ರಭಾವದಿಂದ ಕಳೆದ ಮೂರು ದಿನಗಳಿಂದ ಉಳ್ಳಾಲದಲ್ಲಿ ಸಮುದ್ರ ಬಿರುಸು ಮುಂದುವರೆದಿದ್ದು ಶುಕ್ರವಾರ ಸಮುದ್ರದ ಅಲೆಗೆ ಭಾಗಶ: ಹಾನಿಯಾಗಿದ್ದ ಝೊಹರಾ ರಹೀಮ್ ಅವರ ಮನೆ ಸಂಪೂರ್ಣ ಹಾನಿಯಾದರೆ 47 ಮನೆಗಳ ಅತ್ಯಂತ ಅಪಾಯದಲ್ಲಿರುವ ಮನೆಗಳೆಂದು ಗುರುತಿಸಲಾಗಿದೆ.
ಉಳ್ಳಾಲ ಕೈಕೋ, ಕಿಲೆರಿಯಾನಗರ, ಸುಭಾಷ್ನಗರದಲ್ಲಿ ಸಮುದ್ರ ತಟದ 167 ಮನೆಗಳಲ್ಲಿ 47 ಮನೆಗಳನ್ನು ಅತ್ಯಂತ ಅಪಾಯಕಾರಿ ಎಂದು ಗುರುತಸಿ ಆ ಮನೆಗಳನಿವಾಸಿಗಳನ್ನು ಇಂತಹ ಸಂದರ್ಭದಲ್ಲಿ ಮನೆ ಖಾಲಿ ಮಾಡಿಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡುವಂತೆ ಮೊದಲೇ ಸೂಚಿಸಲಾಗಿತ್ತು. ಎಂದು ನಗರಸಭಾ ಪೌರಾಯಕ್ತೆ ವಾಣಿ ಆಳ್ವ ಮಾಹಿತಿ ನೀಡಿದರು. ಈಗಾಗಲೇ ಹೆಚ್ಚಿನ ಮನೆಗಳಿಂದ ಸ್ಥಳೀಯ ಮತ್ತು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದರು.
ಕಡಲ್ಕೊರೆತ ಮತ್ತು ಕೈಕೋ, ಮುಕ್ಕಚ್ಚೇರಿ, ಕಿಲೆರಿಯಾನಗರದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡುವಂತೆ ಜಾತ್ಯಾತೀತ ಜನತಾದಳದ ಉಳ್ಳಾಲ ವಿಧಾನ ಸಭಾ ಕ್ಷೇತ್ರದಿಂದ ನಿಯೋಗ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ನಿಯೋಗದಲ್ಲಿ ಯು ಎಚ್ ಫಾರೂಕ್ ನಝೀರ್ ಉಳ್ಳಾಲ್, ಅಶ್ರಫ್ ಬಾವ ಕೋಡಿ, ಮಹಮ್ಮದ್ ಬಶೀರ್ ಕೈಕೋ , ಎವೆರಸ್ಟ್ ಮುಸ್ತಾಫ ಸೇರಿದಂತೆ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.