UN NETWORKS
ಉಳ್ಳಾಲ: ಉಳ್ಳಾಲ ನಗರಸಭೆಯ 14ನೇ ವಾರ್ಡ್ನಿಂದ ಚುನಾಯಿತರಾದ ಯು.ಪಿ. ಅಯ್ಯೂಬ್ ಅವರಿಗೆ ಉಳ್ಳಾಲ ಮಾರ್ಗತಲೆ ಕಟ್ಟತ್ತಲ ನಾಗರಿಕರಿಂದ ಸನ್ಮಾನ ಕಾರ್ಯಕ್ರಮವು ಕಟ್ಟತ್ತಿಲ ಜಂಕ್ಷನ್ನಲ್ಲಿ ನಡೆಯಿತು.
ಈ ಸಂದರ್ಭ ಉಳ್ಳಾಲ ನಗರ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪಿ.ಎಂ. ಮೊಹಮ್ಮದ್, ಗುತ್ತಿಗೆದಾರರಾದ ಸಾದಿಕ್, ಪಕ್ವಾನ್ ಅಹ್ಮದ್, ಕರೀಂ ಅಳೇಕಲ, ಅಬ್ದುಲ್ ಲತೀಫ್, ಉಸ್ಮಾನ್ ಮಾರ್ಗತಲೆ, ಹನೀಫ್ ಪರಪ್ಪು , ಆಸೀಫ್ ಕಟ್ಟತ್ತಲೆ, ಅಶ್ಫಾಕ್ ಕಟ್ಟತ್ತೆಲ, ಮಿಸ್ಬಾಹ್ ಮಾರ್ಗತಲೆ, ಬಾದ್ಶ ಮಂಚಿಲ ಉಪಸ್ಥಿತರಿದ್ದರು. ರಿಯಾಝ್ ಕಾರ್ಯಕ್ರಮ ನಿರೂಪಿಸಿದರು.