UN NETWORKS
ಉಳ್ಳಾಲ: ಬೆಂಕಿ ಅವಘಢಕ್ಕೆ ತುತ್ತಾಗಿ ಮನೆಯೊಳಗಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿ, ಮನೆಯೂ ಭಾಗಶ: ಹಾನಿಯಾಗಿರುವ ಘಟನೆ ಉಳ್ಳಾಲ ನಗರಸಭೆಯ 24ನೇ ವಾರ್ಡಿನ ಧರ್ಮನಗರ ಬೊಟ್ಟು ಎಂಬಲ್ಲಿ ಶನಿವಾರ ಸಂಜೆ ವೇಳೆ ನಡೆದಿದೆ. ಘಟನೆ ವೇಳೆ ಮನೆಯೊಳಗಿದ್ದ ಟ್ಯೂಷನ್ನಿಗೆಂದು ಬಂದಿದ್ದ 15 ಮಕ್ಕಳು ಹಾಗೂ ಮನೆಯ ಮೂರು ಮಂದಿ ಪವಾಡಸದೃಶವಾಗಿ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ನಗರಸಭೆ ಸದಸ್ಯ ರವಿಚಂದ್ರ ಗಟ್ಟಿ ಭೇಟಿ ನೀಡಿ ಸರಕಾರದಿಂದ ಸಿಗುವ ಪರಿಹಾರವನ್ನು ಒದಗಿಸುವ ಭರವಸೆ ನೀಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಕೆ. ಪ್ರಮೋದ್ ಕುಮಾರ್, ಸಹಾಯಕ ನವನೀತ್, ನಗರಸಭೆಯ ನಾಮನಿರ್ದೇಶಿತ ಸದಸ್ಯ ರಿಚರ್ಡ್ ಲೂಯಿಸ್ ಉಪಸ್ಥಿತರಿದ್ದರು.