Site icon Ullalavani

ಸ್ಪರ್ಧಾ ಮನೋಭಾವನೆಯಿಂದ ಆಡಿದರೆ ಉತ್ತಮ ಭವಿಷ್ಯ : ಪ್ರೇಮನಾಥ್ ಉಳ್ಳಾಲ್

UN NETWORKS

ದೇರಳಕಟ್ಟೆ: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ಆಟವಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿ ಕ್ಷೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಾಣಲು ಸಾಧ್ಯ ಎಂದು ಅಂತರ್ ರಾಷ್ಟ್ರೀಯ ಕಬ್ಬಡಿ ತೀರ್ಪುಗಾರರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೇಮನಾಥ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಯೇನೆಪೊಯ ಯಂಡೊರೆನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ವಿ.ವಿ ಮಟ್ಟದ “ಜ್ಯಾಯಿಸ್ ಪೈಸ್” ಸ್ಮಾರಕ ರೋಲಿಂಗ್ ಟ್ರೋಫಿ ಮಹಿಳೆಯರ ಅಂತರ ಕಾಲೇಜು ಬಾಸ್ಕೇಟ್ ಬಾಲ್ ಪಂದ್ಯ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕುಲಪತಿ ಡಾ| ಕಿಶೋರ್ ಕುಮಾರ್ ಸಿ.ಕೆ., ವಿದ್ಯಾರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ನಗರ ಪಂಚಾಯತ್ ಕೌನ್ಸಿಲರ್ ಭವಾನಿ ಉಪಸ್ಥಿತರಿದ್ದರು.

ಸ್ಕೂಲ್ ಆಫ್ ಸೋಶಿಯಲ್ ವರ್ಕ ರೋಶನಿ ನಿಲಯದ ಪ್ರಾಂಶುಪಾಲೆ ಪ್ರೊ| ಜ್ಯೂಲಿಯಟ್ ಸಿ.ಜೆ ಅಧ್ಯಕ್ಷತೆ ವಹಿಸಿದ್ದರು.

Exit mobile version