UN NETWORKS
ಉಳ್ಳಾಲ : ಉಳ್ಳಾಲವನ್ನು ಉತ್ತಮ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ನಗರೊತ್ಥಾನ ಯೋಜನೆಯಡಿ ನಡೆಯಲಿರುವ ರಸ್ತೆ ಅಭಿವೃದ್ಧಿಯ ಪರಿಶೀಲನೆ ನಡೆಸಿ ಮಾತನಾಡಿದರು.
ಕುಂಪಲ ಅಂಬ್ಲಮೊಗರು ಶಾಲೆಗೆ 2 ಕೋಟಿ ರೂ. : ಕುಂಪಲ ಸರಕಾರಿ ಶಾಲೆ ಕಟ್ಡ ನಿರ್ಮಣಕ್ಕೆ 2 ಕೋಟಿ ರೂ. ಮತ್ತು ಅಂಬ್ಲಮೊಗರು ಸರಕಾರಿ ಕಾಲೇಜು ಅಭಿವದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಶೈಕ್ಷಣಿಕ ಕಾರ್ಯಗಳಿಗೆ ಸರಕಾರ ಹಣ ನೀಡಲಿದೆ ಎಂದರು.ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಸದಸ್ಯರಾದ ಬಾಝಿಲ್ ಡಿ.ಸೋಜ, ಮಹಮ್ಮದ್ ಮುಕ್ಕಚ್ಚೇರಿ, ಯು.ಎ. ಇಸ್ಮಾಯಿಲ್, ವೀಣಾ ಉಳಿಯ, ಶಶಿಕಲಾ, ಮಾಜಿ ಸದಸ್ಯರಾದ ಹುಸೈನ್ ಕುಂಇಮೋನು, ದಿನೇಶ್ ರೈ, ಮಹಮ್ಮದ್ ಮುಸ್ತಾಫ, ಇಸ್ಮಾಯಿಲ್ ಪೊಡಿಮೋನು,ಅಝೀಝ್ ಹಕ್, ಪಿಡಬ್ಲುಡಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರವಿ ಕುಮಾರ್, ಸಹಾಯಕ ಅಭಿಯಂತರ ರತ್ನಾಕರ್, ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ, ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಕಾಮತ್, ಕಿರಿಯ ಅಭಿಯಂತರ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.