UN NETWORKS
ತಲಪಾಡಿ: ಶಿಕ್ಷಣ ಸಂಸ್ಥೆಗಳಲ್ಲಿ ಹಳೆ ವಿದ್ಯಾರ್ಥಿಗಳ ರಚನಾತ್ಮಕ ಕಾರ್ಯ ಮಹತ್ವಪೂರ್ಣವಾಗಿದ್ದು ಅದರಲ್ಲೂ ಪ್ರಾಥಮಿಕ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸುವ, ಮರಿಯಾಶ್ರಮ ಹಳೆ ವಿದ್ಯಾರ್ಥಿ ಸಂಘ ಶ್ಲಾಘನೀಯ ಎಂದು ಶಾಲಾ ಸಂಚಾಲಕ ಧರ್ಮಗುರು ಎಡ್ವಿನ್ ಮಸ್ಕರೇನಸ್ ಹೇಳಿದರು.
ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ವಿನಯ ನಾಯಕ್ ಮಾತನಾಡಿ ಯೋಜನೆಯ ಒಟ್ಟು ವೆಚ್ಚವನ್ನು ಸರಿದೂಗಿಸಲು ಹಳೆ ವಿದ್ಯಾರ್ಥಿಗಳ ವಿವಿಧ ಸ್ತರಗಳಲ್ಲಿ ಶ್ರಮಿಸಬೇಕೆಂದು ವಿನಂತಿಸಿದರು.ಮುಖ್ಯ ಶಿಕ್ಷಕಿ ಮೇರಿ ಪಿಂಟೊ, ಮಧುಸೂದನ ಆಚಾರ್, ನಾರಾಯಣ ಪೂಜಾರಿ, ವಿನ್ಸೆಂಟ್ ಡಿಸೋಜ ಹಾಗೂ ಮೂಸಾ ತಲಪಾಡಿ ಉಪಸ್ಥಿತರಿದ್ದರು.ವಿನಯ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಿದ್ದಿಕ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ ವಂದಿಸಿದರು.