UN NETWORKS
ಉಳ್ಳಾಲ: ಉಳ್ಳಾಲ ಉಳಿಯ ನೇತ್ರಾವತಿ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸ್ಥಳೀಯ ಜನವಸತಿ ಪ್ರದೇಶಗಳು ಜಲಾವೃತವಾಗಿದೆ.
ರಾತ್ರಿಯಿಡೀ ಮಲಗಲಿಲ್ಲ : ತಡರಾತ್ರಿ 11 ಗಂಟೆ ನಂತರ ಮನೆ ಅಂಗಳವಿಡೀ ಜಲಾವೃತವಾಗಿದೆ. ಎಲ್ಲರೂ ಮನೆಯೊಳಗೆ ನೀರು ಬರುವ ಆತಂಕದಲ್ಲಿ ಸಾಮಾಗ್ರಿಗಳನ್ನು ಮೇಲಕ್ಕೆ ಇಟ್ಟಿದ್ದಾರೆ. ಸ್ಥಳೀಯ ಯುವಕರೆಲ್ಲರೂ ಸೇರಿಕೊಂಡು ಹೊರಗಡೆಯೇ ಸ್ಥಳೀಯರ ನೆರವಿಗೆ ನಿಂತಿದ್ದರು. ಹಲವು ವರ್ಷಗಳ ಬಳಿಕ ಈ ಭಾಗದಲ್ಲಿ ನೆರೆ ನೀರು ತುಂಬಿದೆ . ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಅವಶ್ಯಕತೆ ಬಿದ್ದಲ್ಲಿ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ಸ್ಥಾಪಿಸುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಪ್ರಮೀಳಾ ಡಿಸೋಜ ತಿಳಿಸಿದ್ದಾರೆ.