UN NETWORKS
ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ, ಮೊಸರು ಕುಡಿಕೆ ಉತ್ಸವ ಸಮಿತಿ ಕೊಣಾಜೆ ಹಾಗೂ ನಾಗಬ್ರಹ್ಮ ಪ್ರಗತಿಪರ ಸ್ವಹಾಯ ಸಂಘಗಳ ಆಶ್ರಯದಲ್ಲಿ 15ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ಸಾರ್ವಜನಿಕ ಕ್ರೀಡಾಕೂಟ ನಡೆಯಿತು.
ಕಾರ್ಯಕ್ರಮದಲ್ಲಿ ಕೊಣಾಜೆಯ ಸೀತಾರಾಮ ಗಟ್ಟಿ, ಮಹಾಬಲ ಗಟ್ಟಿ, ದಯಾನಂದ ಗಟ್ಟಿ, ಮಹಮ್ಮದ್ ಮನ್ಸೂರ್, ರಾಜೇಶ್ ಶೆಟ್ಟಿ, ಸುನೀಲ್ ಕುಮಾರ್ ಗಟ್ಟಿ, ಹಸನ್ ಕುಂಞ, ಅದ್ರಾಮ, ಹೆನ್ರಿ ಡಿ’ಸೋಜ, ಸುಧಾಕರ ಕೊಣಾಜೆ, ಅಬ್ಬಾಸ್, ಶೆರೀಫ್ ಕೋಡಿಜಾಲ್, ಚಂದ್ರಶೇಖರ ಪೂಜಾರಿ, ಸುಜಯ, ಉಮಾವತಿ, ಸುಜಾತ ಶೆಟ್ಟಿ, ಸುಚಿತ್ರಾ, ಗೀತಾ, ಮೀರಾ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಕೊಣಾಜೆ ಕಲ್ಲಿಮಾರ್ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ಯುವಕರು, ವಿದ್ಯಾರ್ಥಿಗಳು ತೊಡಗಿಸಿಕೊಂಡರು.