Site icon Ullalavani

ಹಜ್ಜ್ ಯಾತ್ರಿಕರನ್ನು ಗೌರವಿಸುವುದು ಕೂಡಾ ಉತ್ತಮ ಕಾರ್ಯ

UN NETWORKS

ಕಿನ್ಯ: ಬುಖಾರಿ ಜುಮಾ ಮಸ್ಜಿದ್ ಬದ್ರಿಯ ನಗರ ಕಿನ್ಯ ಇದರ ವತಿಯಿಂದ ಪವಿತ್ರವಾದ ಹಜ್ಜ್ ಕರ್ಮ ನಿರ್ವಹಿಸಲು ಯಾತ್ರೆಗೈಯ್ಯುವ ಬುಖಾರಿ ಜುಮಾ ಮಸೀದಿಯ ಪ್ರಧಾನ ಕಾರ್ಯಧರ್ಶಿ ಅಬ್ಬಾಸ್ ನಾಟೆಕಲ್ ಅವರಿಗೆ ಬೀಳ್ಕೊಡುವ ಸಮಾರಂಭ ಸೋಮವಾರ ಕಿನ್ಯ ಬುಖಾರಿ ಮಸೀದಿಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಸೈಯ್ಯದ್ ಜಲಾಲುಧ್ಧೀನ್ ಸಹದಿ ತಂಙಳ್‍ರವರು ಹಜ್ಜ್ ಇಸ್ಲಾಮಿನ ಪುಣ್ಯ ಕರ್ಮವಾಗಿದ್ದು, ಇದಕ್ಕೆ ಅರ್ಹರಾದವರು ಯಾತ್ರೆ ಮಾಡಲೇಬೇಕು. ಅದೇ ರೀತಿ ಹಜ್ಜ್‍ಯಾತ್ರಿಕರನ್ನು ಗೌರವಿಸುವುದು ಕೂಡಾ ಉತ್ತಮ ಕಾರ್ಯ ಎಂದರು. ಈ ಸಂದರ್ಭದಲ್ಲಿ ಅವರನ್ನು ಬುಖಾರಿ ಮಸೀದಿಯ ಜಮಾಅತ್ ವತಿಯಿಂದ ಶಾಲು ಹೂದಿಸಿ ಬೀಳ್ಕೂಡಲಾಯಿತು ಕಾರ್ಯಕ್ರಮದಲ್ಲಿ ಸೈಯ್ಯದ್ ಅಲವಿತಂಙಳ್,ಉಸ್ಮಾನ್ ಸಖಾಫಿ, ಕೆ.ಎಸ್. ಹಮ್ಮದ್ ಕುಂಞ, ವಿ.ಎ. ಮೊಹಮ್ಮದ್ ಮುಸ್ಲಿಯಾರ್,ಕೆ.ಎಂ.ಮುಸ್ತಫ ನಹೀಮಿ,ಕೆ.ಹೆಚ್. ಮೂಸಕುಂಞ, ಎಂ.ಕೆ.ಎಂ. ಇಸ್ಮಾಯಿಲ್,ಹೈದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.ಮೆಹಬೂಬ್ ಸಖಾಫಿ ಕಿನ್ಯ ಸ್ವಾಗತಿಸಿದರು.

Exit mobile version