UN NETWORKS
ಕೊಣಾಜೆ: ಕೇಸರಿಮಿತ್ರ ವೃಂದ, ಕೇಸರಿ ಮಾತೃ ಮಂಡಳಿ ಕುಂಪಲ ಹಾಗೂ ರೋಟರಿ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದಲ್ಲಿ “ಆಟಿಡೊಂಜಿ ದಿನ” ಆಟಿಯ ವಿಶೇಷ ಕಾರ್ಯಕ್ರಮ ಅಸೈಗೋಳಿಯ ಅಭಯ ಆಶ್ರಯ ಆತ್ಮ ದೇಗುಲದಲ್ಲಿ ನಡೆಯಿತು.
ಆಕಾಶವಾಣಿ ಮಂಗಳೂರು ತುಳು ವಾರ್ತಾ ವಾಚಕ ರಘುನಾಥ್ ವರ್ಕಾಡಿ ವಿಶೇಷತೆಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಆತ್ಮ ದೇಗುಲದ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ರಸಪ್ರಶ್ನೆ, ಒಗಟುಗಳು ಕೇಳಲಾಯಿತು ಹಾಗೂ ಚುಟುಕು ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಶ್ರುತಿಲಯ ಕಲಾ ಕೇಂದ್ರ, ಕುತ್ತಾರ್ ಇವರಿಂದ ಮನರಂಜನೆಗಾಗಿ ಆಟಿ ಕಳೆಂಜ, ಮತ್ತು ಇತರ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಕಾರ್ಯಕ್ರಮ ನಡೆಯಿತು.
ಸುಮಾರು 20ಕ್ಕೂ ಮಿಕ್ಕಿದ ಆಟಿಯ ವಿಶೇಷ ಆಹಾರವನ್ನು ಮಾತೃ ಮಂಡಳಿಯ ಸದಸ್ಯರು ಸ್ವತಃ ತಯಾರಿಸಿ ಆತ್ಮದೇಗುಲದ ಸದಸ್ಯರಿಗೆ ಮತ್ತು ಸೇರಿದ ಸಭಿಕರಿಗೆ ಉಣಬಡಿಸಿದರು. ಕೋಣಾಜೆ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಕೂಡಾ ಆಗಮಿಸಿ ಆಟಿಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಂತಿಮವಾಗಿ ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ ಇದರ ವತಿಯಿಂದ 5000 ರೂ. ಧನಸಹಾಯವನ್ನು ಆತ್ಮ ದೇಗುಲದ ಮೇಲ್ವಿಚಾರಕಿ ನಳಿನಿ ಅವರಿಗೆ ಹಸ್ತಾಂತರಿಸಲಾಯಿತು. ಕೇಸರಿ ಮಿತ್ರವೃಂದ ಮತ್ತು ಕೇಸರಿ ಮಾತೃ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.