Site icon Ullalavani

ಶಾರದಾ ವಿದ್ಯಾನಿಕೇತನದಲ್ಲಿ ಕಾರ್ಗಿಲ್ ದಿನಾಚರಣೆ

UN NETWORKS

ತಲಪಾಡಿ: ಭಾರತೀಯ ಸೇನೆಯು ಪಾಕಿಸ್ತಾನದ ಹಿಡಿತದಲ್ಲಿದ್ದ ಕಾರ್ಗಿಲ್‍ನ್ನು ವಶಪಡಿಸಿದ ದಿನವಾದ ಜು. 26ನ್ನು ನೆನಪಿಸುವ ಸಲುವಾಗಿ ಕಾರ್ಗಿಲ್ ವಿಜಯ ದಿವಸವನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭೂಸೇನೆಯ ನಿವೃತ್ತ ಸೈನಿಕ ಹೇಮಂತ್ ಕುಮಾರ್ ಭಾರತೀಯ ಸೇನೆ ಮತ್ತು ಅದರ ಭವ್ಯ ಪರಂಪರೆ ಮತ್ತು ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ್ದ ತಮ್ಮ ರೋಚಕ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನ್‍ಕರ್ ಮಾತನಾಡಿ ಸೈನಿಕನ ಜೀವನ ಹೇಗೆ ಇತರರಿಗೆ ಮಾದರಿಯಾಗಬಲ್ಲದು ಮತ್ತು ಭಾರತೀಯ ಸೇನೆಯಲ್ಲಿ ಲಭ್ಯವಿರುವ ವಿಪುಲ ಸೌಲಭ್ಯಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಉದ್ದೀಪಿಸುವ ಸಲುವಾಗಿ ಶಾಲೆಯ ಅಂತರ್‍ದಳಗಳ ನಡುವೆ ಅಮರ್ ಜವಾನ್ ಎಂಬ ವಿಷಯ ಆಧಾರಿತ ಪ್ರತಿಭಾ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸೈನಿಕರ ಜೀವನದ ತ್ಯಾಗ ಮತ್ತು ಬಲಿದಾನಗಳ ಮಹತ್ವವನ್ನು ಅರಿತುಕೊಂಡರು.

Exit mobile version