Site icon Ullalavani

ವಿದ್ಯಾರತ್ನ ಶಾಲೆಯಲ್ಲಿ ವನ ಮಹೋತ್ಸವ

UN NETWORKS

ಉಳ್ಳಾಲ: ಪರಿಸರ ಎಂದರೆ ಕೇವಲ ಮರ ಬಳ್ಳಿಗಳು ಮಾತ್ರ ಅಲ್ಲ, ಭೌಗೋಳಿಕ, ಜೈವಿಕವಾಗಿ ದೇವರ ಸೃಷ್ಟಿಯಾಗಿದೆ. ಆದರೆ ಇದನ್ನು ಉಳಿಸಬೇಕಾದ ನಾವು ಸಾಮಾಜಿಕ ಪರಿಸರ ಕಾಳಜಿ ಮರೆತಿದ್ದೇವೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಅಭಿಪ್ರಾಯಪಟ್ಟರು.

ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯಲ್ಲಿ ರತ್ನ ಇಕೋ ಕ್ಲಬ್ ವತಿಯಿಂದ ಶನಿವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಮಾತನಾಡಿದರು.ಕಾಡು ಕಡಿಮೆಯಾದಾಗ ಕಾಡುಪ್ರಾಣಿಗಳು, ಸರೀಸೃಪಗಳು ನಾಡಿಗೆ ಬರುವ ಪ್ರಮೇಯ ಬರುತ್ತದೆ. ನಮ್ಮ ಹಿರಿಯರು ಗಿಡ ನೆಟ್ಟು ಬೆಳೆಸಿದ್ದರಿಂದ ನಾವಿಂದು ಹಣ್ಣು, ಇತರ ಆಹಾರ ವಸ್ತುಗಳನ್ನು ಸೇವಿಸುತ್ತಿದ್ದೇವೆ. ಮುಂದಿನ ಪೀಳಿಗೆಗೂ ಮುಂದುವರಿಯಬೇಕಾದರೂ ಇಂದೇ ಗಿಡ ನೆಡಬೇಕಾಗುತ್ತದೆ. ಪ್ರತಿವರ್ಷ ಹುಟ್ಟುಹಬ್ಬ ಆಚರಿಸುವ ಸಂದರ್ಭ ಸವಿ ನೆನಪಿಗಾಗಿ ಗಿಡ ನೆಟ್ಟು ಬೆಳೆಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.

ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯತೆ ಬಿಂಬಿಸುವ ಕಾರ್ಯಕ್ರಮದೊಂದಿಗೆ ಸಂಸ್ಕಾರ ಕಲಿಸುವ ಕೆಲಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಪರಿಸರಿ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಈ ವಿಷಯದಲ್ಲಿ ನಡೆಯುವ ಕಾರ್ಯಕ್ರಮ ಮಾನವೀಯ ನೆಲೆಯಿಂದ ಕೂಟಿದೆ ಎಂದರು.
ರತ್ನಾವತಿ ಶೆಟ್ಟಿ ಉಳಿದೊಟ್ಟು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬೆಳ್ಮ ಅನುದಾನಿತ ಹಿರಿಯ ಪ್ರಾರ್ಥಮಿಕ ಶಾಲೆ, ಹರೇಕಳ ಶ್ರೀ ರಾಮಕೃಷ್ಣ ಶಾಲೆ, ದೇರಳಕಟ್ಟೆ ನೇತಾಜಿ ಶಾಲೆ ಹಾಗೂ ವಿದ್ಯಾರತ್ನ ಶಾಲೆ 1000 ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು.ಜಿಲ್ಲಾ ರೈತಸಂಘ ಹಸಿರು ಸೇನೆಯ ಸಂಘಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು, ಕೊರಗಪ್ಪ ಶೆಟ್ಟಿ ಉಳಿದೊಟ್ಟು, ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ, ಮುಖ್ಯ ಶಿಕ್ಷಕಿ ನಯೀಮಾ ಹಮೀದ್, ಕ್ಲಸ್ಟರ್ ಸಿಆರ್ ಪಿ ರಾಜೇಶ್ವರಿ, ಪುರುಷೋತ್ತಮ ಆಂಚನ್ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಸಹಶಿಕ್ಷಕ ನವೀನ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ರವಿಕುಮಾರ್ ಕೋಡಿ ವಂದಿಸಿದರು.

Exit mobile version