UN NETWORKS
ಉಳ್ಳಾಲ: ಉಳ್ಳಾಲ ವಲಯ ಬಂಟರ ಸಂಘದಿಂದ ನೂತನವಾಗಿ ನಿರ್ಮಾಣಗೊಂಡಿರುವ `ಬಂಟರ ಭವನ’ ಒಂದು ಹೆಮ್ಮೆಯ ಪ್ರತೀಕವಾಗಿದ್ದು ಭವನ ನಿರ್ಮಾಣದಿಂದ ಸಂಘದ ಗರಿಮೆ ಇನ್ನಷ್ಟು ಹೆಚ್ಚಿದಂತಾಗಿದೆ ಎಂದು ಉಳ್ಳಾಲ ವಲಯ ಬಂಟರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಳ್ಯಗುತ್ತು ಅಭಿಪ್ರಾಯಪಟ್ಟರು. ಕೊಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ಬಂಟರ ಸಂಘ ಉಳ್ಳಾಲ ವಲಯ ಇದರ ಹದಿನೇಳನೆ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಮಾತನಾಡಿ ಉಳ್ಳಾಲ ವಲಯ ಬಂಟರ ಸಂಘ ಸದೃಡವಾಗಿದೆ. ಕಳೆದ ಎರಡು ವರ್ಷದಲ್ಲಿ ಸಂಘ ವಿನೂತನ ರೀತಿಯಲ್ಲಿ ಚಟುವಟಿಕೆ ನಡೆಸುವಲ್ಲಿ ಯಶಸ್ವಿಯಾಗಿದೆ. ಸಂಘಕ್ಕೆ ಇನ್ನಷ್ಟು ಹೊಸ ಮುಖಗಳನ್ನು ಪರಿಚಯಿಸುವ ಕಾರ್ಯ ಆಗಬೇಕು ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುವ ಯುವಜನರನ್ನು ಸಂಘಟಿಸುವ ಕಾರ್ಯ ಆಗಬೇಕು ಎಂದರು.
ಸಭೆಯಲ್ಲಿ ಬಂಟರ ಸಂಘ ಉಳ್ಳಾಲ ವಲಯ ಉಪಾಧ್ಯಕ್ಷರಾದ ಶ್ರೀಕರ್ ಶೆಟ್ಟಿ ಬೋಳ್ಯಾರು, ಚಿತ್ರಾ ಜಿ. ಅಡ್ಯಂತಾಯ, ಸಂಘಟನಾ ಕಾರ್ಯದರ್ಶಿ ಜಗದೀಶ್ ರೈ ಬೆಳ್ಮ ಹೊಸಮನೆ, ಜೊತೆ ಕಾರ್ಯದರ್ಶಿ ಅಶೋಕ್ ರೈ ಮಡ್ಯಾರ್, ಜೊತೆಕಾರ್ಯದರ್ಶಿ ನಾರಾಯಣ ರೈ ಕಕ್ಕೆಮಜಲ್,ಸಿರಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾರಾದ ಶೆಟ್ಟಿ ಉಳ್ಳಾಲ, ಮಹಿಳಾ ಸಂಘದ ಅಧ್ಯಕ್ಷೆ ಶಶಿಕಲಾ ಶೆಟ್ಟಿ ಭಟ್ನಗರ ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿ ಮೋಹನ್ದಾಸ್ ಗಾಂಭೀರ್ ಬೋಳ್ಯಾರುಗುತ್ತು ಸಂಘದ ವರದಿ ವಾಚಿಸಿದರು. ಸಂಘದ ಲೆಕ್ಕಪತ್ರಮಂಡನೆಯನ್ನು ಕೋಶಾ„ಕಾರಿ ಪುರುಷೋತ್ತಮ ಮಾಣಾೈ, ಕಟ್ಟಡ ಸಮಿತಿಯ ಲೆಕ್ಕಪತ್ರವನ್ನು ಸಂಜೀವ ಶೆಟ್ಟಿ ಕಟ್ಟಡ ಸಮಿತಿ ಲೆಕ್ಕಪತ್ರ ಕಟ್ಟಡ ಸಮಿತಿ ಕೋಶಾಧಿಕಾರಿ ಸಂಜೀವ ಶೆಟ್ಟಿ ಪಡ್ಯಾರಮನೆ ಮಂಡಿಸಿದರು. ಕಟ್ಟಡ ಸಮಿತಿಯ ವರದಿಯನ್ನು ಕೆ. ರವೀಂದ್ರ ರೈ ಕಲ್ಲಿಮಾರು ವಾಚಿಸಿದರು.ಸಭೆಯಲ್ಲಿ 14 ಗ್ರಾಮಗಳ ಅಧ್ಯಕ್ಷರು, ಪದಾಧಿಕಾರಿಗಳು, ಉಳ್ಳಾಲ ಬಂಟರ ಸಂಘದ ಪದಾಧಿಕಾರಿಗಳು, ಕಟ್ಟಡ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.