UN NETWORKS
ಉಳ್ಳಾಲ: ನನ್ನೊಳಗಿನ ಅಂತರಾತ್ಮದ ಕಥನವನ್ನು ಲೋಕಾರ್ಪಣೆಗೊಳ್ಳುವ ಮುನ್ನವೇ ಅಲ್ಲಾಹನ ಕರೆಗೆ ಓಗೊಟ್ಟು ಇಂದು ನಮ್ಮನ್ನಗಲಿದ ಕರ್ನಾಟಕ ರಾಜ್ಯ ಕಂಡ ಸರಳ, ಸಜ್ಜನ ಮತ್ತು ನೇರ ನಡೆ ನುಡಿಯ ಪ್ರಾಮಾಣಿಕ ಮುಸ್ಲಿಮ್ ಸಮುದಾಯದ ಹೆಮ್ಮೆಯ ರಾಜಕಾರಣಿ
ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ ಮೊಯಿದಿನ್ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಮ್ಮನ್ನಗಲಿದ್ದಾರೆ .
ಇವರ ಅಗಲುವಿಕೆಗೆ ಇಂದು ಬೆಳಗ್ಗೆ ಎಸ್.ಡಿ.ಪಿ.ಐ. ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಸಮಿತಿ ಸಭೆ ಕರೆದು ಸಭೆಯಲ್ಲಿ ತೀವ್ರ ಸಂತಾಪ ಸೂಚಿಸುತ್ತಾ , ಸರ್ವಶಕ್ತನು ಅವರ ಸೇವೆಯನ್ನು ಸ್ವೀಕರಿಸಲಿ ಮತ್ತು ಇವರ ರಾಜಕೀಯ ಮತ್ತು ಸಾಮಾಜಿಕ ಜೀವನವು ಜನಪ್ರತಿನಿಧಿಗಳಿಗೆ ಮಾದರಿಯಾಗಲಿ ಎಂದು ಎಸ್.ಡಿ.ಪಿ.ಐ. ದ.ಕ. ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಯವರು ತಿಳಿಸಿದ್ದಾರೆ .