UN NETWORKS
ಉಳ್ಳಾಲ: ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದು ನಿಜವಾದ ದೇಶ ಪ್ರೇಮವಾಗಿದೆ. ಈ ಉದ್ದೇಶದಲ್ಲಿ ಆರಂಭಗೊಂಡಿರುವ ಹೊಸ ರಹ್ಮಾನಿಯ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಕಾರ್ಯ ಶ್ಲಾಘನೀಯ ಎಂದು ವಸತಿ ಮತ್ತು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.
ಹೊಸ ರಹ್ಮಾನಿಯಾ ಮಸೀದಿ ಹಾಗೂ ಹೆಚ್.ಐ.ಎಂ ಮದರಸದ ಯು.ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿದ್ದರು. ಅಬುದಾಬಿಯ ಬೇರಿಸ್ ವೆಲ್ಪೇರ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎಂ.ಮಹಮ್ಮದ್ ಆಲಿ, ಅನಿವಾಸಿ ಭಾರತೀಯ ಅಬ್ಬಾಸ್ ಪೋಕರ್, ದಮಾಮ್ ಕೋಟ್ನ ಮರ್ಕಝ್ ಮದೀನದ ಸದಸ್ಯ ಮಹಮ್ಮದ್ ಶರೀಫ್, ಫಲಾಹ್ ಎಜ್ಯುಕೇಷನ್ ಟ್ರಸ್ಟಿನ ಯು.ಬಿ.ಮಹಮ್ಮದ್, ಅಬ್ಬಾಸ್ ಪೆರಿಬೈಲ್, ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ಆರ್ ರಶೀದ್, ಹೆಚ್. ಐ.ಎಂ ಸಂಚಾಲಕ ಅಬ್ದುಲ್ ಸಲಾಂ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಆಸೀಫ್, ಮುಬಾರಕ್ ಮಸೀದಿ ಕೆ.ಸಿ.ರೋಡಿನ ಅಧ್ಯಕ್ಷ ಕೆ.ಎಂ.ಅಬ್ಬಾಸ್ ಕೊಳಂಗೆರೆ, ಮರ್ಕಝ್ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಎಂ ಅಬ್ದುಲ್ಲಾ, ಮೊಹ್ಸಿನ್ ರೆಹಮಾನ್, ಯು.ಬಿ.ರಹೀಂ, ಕಾಂಗ್ರೆಸ್ ಮುಖಂಡ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.
ಸದಸ್ಯ ಸಲಾಂ ಉಚ್ಚಿಲ್ ಸ್ವಾಗತಿಸಿದರು. ಅಬ್ದುಲ್ ನಾಸಿರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಕನ್ಯಾ ವಂದಿಸಿದರು.