UN NETWORKS
ಉಳ್ಳಾಲ: ಸಹಕಾರಿ ಸಂಘ ಸಮಾಜಮುಖಿಯಾಗಿ ಸೇವೆಯನ್ನು ನಡೆಸುತ್ತಾ ಬಂದಿದ್ದು, ಹಲವು ಕಡೆಗಳಲ್ಲಿ ಶಾಖೆಯನ್ನು ತೆರೆದು ಸಮಾಜದ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಸುರೇಶ್ ರೈ, ಉಪಾಧ್ಯಕ್ಷ ಟಿ.ತಾರನಾಥ ಕೊಟ್ಟಾರಿ, ನಿರ್ದೇಶಕರುಗಳಾದ ಜಯಂತ್.ಜೆ.ಕೋಟ್ಯಾನ್, ಬಿ.ಕೆ.ಚಂದ್ರಶೇಖರ್, ವೇಣುಗೋಪಾಲ್ ಮಾರ್ಲ, ಉಗ್ಗಪ್ಪ ಶೆಟ್ಟಿ, ಸ್ವಾತಿ ಅಶೋಕ್, ಲಿಂಗಪ್ಪ ಗೌಡ, ಪದ್ಮನಾಭ ಶೆಟ್ಟಿ, ದೇವಪ್ಪ ನಂದ, ಶಾರದಾ ಮಣಿ, ತಾರನಾಥ ಶೆಟ್ಟಿ, ಸರಿತಾ ಅಶೋಕ್ ಭಾಗವಹಿಸಿದ್ದರು.
ಮಹಾಪ್ರಬಂಧಕರಾದ ಭಾಸ್ಕರ್ ಮಂಗಲ್ಪಾಡಿ, ಉಪಮಹಾಪ್ರಬಂಧಕ ತಾರನಾಥ ಶೆಟ್ಟಿ, ತೊಕ್ಕೊಟ್ಟು ಶಾಖಾ ವ್ಯವಸ್ಥಾಪಕರಾದ ಜಯಲಕ್ಷ್ಮೀ ಪಿ.ಯಸ್, ಸಲಹಾ ಸಮಿತಿಯ ಕೃಷ್ಣ ಶೆಟ್ಟಿ, ಸಂಜೀವ ಶೆಟ್ಟಿ, ಸಂಜೀವ ಶೆಟ್ಟಿ.ಪಿ, ಮಾಧವ.ಎ, ಚಂದ್ರಾವತಿ , ರವೀಂದ್ರ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ವಿವಿಧ ಶಾಖಾ ವ್ಯವಸ್ಥಾಪಕರು, ಗ್ರಾಹಕರು , ಸ್ವಸಹಾಯ ಸಂಘದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.