UN NETWORKS
ಉಳ್ಳಾಲ: ಉಳ್ಳಾಲದಲ್ಲಿ ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅನಪೇಕ್ಷಿತ ಗುಂಪು ಘರ್ಷನೆಯ ಹೆಸರಿನಲ್ಲಿ ಹಿಂದೂ,ಮುಸ್ಲಿಂ ಎರಡೂ ಸಮುದಾಯದ 60ಕ್ಕೂ ಮಿಕ್ಕಿದ ಅಮಾಯಕರು ಆರೋಪಿಗಳಾಗಿ ಕೋರ್ಟ್ ಗಳಲ್ಲಿ ಅಳೆಯುತ್ತಿದ್ದು, ಉಧ್ಯೋಗ ನಷ್ಟ ಹಾಗೂ ಸಂಪಾದನೆಯು ಇಲ್ಲದೇ ಅತೀವ ಕಷ್ಟಪಡುತ್ತಿದ್ದಾರೆ. ಸರಕಾರ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಮಾಯಕರ ಮೇಲಿನ ಈ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕಂದು ಜಾತ್ಯತೀತ ಜನತಾದಳದ ಮುಖಂಡ ನಝೀರ್ ಉಳ್ಳಾಲ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಮತ್ತು ಉಪ ಮುಖ್ಯಮಂತ್ರಿ,ಹಾಗೂ ಗೃಹ ಸಚಿವರಾದ ಪರಮೇಶ್ವರ್ ರವರನ್ನು ಆಗ್ರಹಿಸಿದ್ದಾರೆ.
ಉಳ್ಳಾಲ ಜಾತ್ಯಾತೀತ ಜನತಾದಳದ ನಿಯೋಗವು ಸಧ್ಯದಲ್ಲೇ ಮುಖ್ಯಮಂತ್ರಿಮತ್ತು ಉಪಮುಖ್ಯಮಂತ್ರಿಯವರನ್ನು ಬೇಟಿಯಾಗಿ ಮೊಕದ್ದಮೆಗಳನ್ನು ಹಿಂತೆಗೆಯಲು,ಒತ್ತಾಯಿಸಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.