Site icon Ullalavani

ಕುಂಪಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸುಧಾರಣೆಗೆ ವಿಶೇಷ ಪೂಜೆ

UN NETWORKS

ಉಳ್ಳಾಲ: ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಪ್ರದಾನಿ ಆಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಶೀಘ್ರ ಸುದಾರಣೆಯಾಗಲಿ ಎಂದು ಕುಂಪಲ ಬಾಲಕೃಷ್ಣ ಮಂದಿರದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಶೇಷ ಪೂಜೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಅಜಾತಶತ್ರು,ಉತ್ತಮ ಆಡಳಿತ ನೀಡಿದ ,ಪ್ರಾಮಾಣಿಕತೆಯ ಇನ್ನೊಂದು ಹೆಸರು ಅಟಲ್ ಬಿಹಾರಿ ವಾಜಪೇಯಿ. ಅವರು ಪ್ರಧಾನಿಯಾಗಿದ್ದಾಗ ಮಾಡಿದ ಅಭಿವೃದ್ದಿ ಕಾರ್ಯಕ್ರಮಗಳು ಜನಮಾನಸದಲ್ಲಿ ಇಂದಿಗೂ ಸ್ಮರಣೀಯವಾಗಿದೆ, ಅರೋಗ್ಯ ಏರುಪೇರಾಗಿದೆ ಎಂಬ ವಿಷಯ ತಿಳಿದು ಅವರ ಅಭಿಮಾನಿಯಾದ ನಮಗೆ ಬಹಳಷ್ಟು ಆತಂಕವಾಯಿತು. ಆದ್ದರಿಂದ ಅವರ ಆರೋಗ್ಯ ಸುಧಾರಣೆಗಾಗಿ ಕುಂಪಲ ಬಾಲಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆ ನಡೆಸಿದ್ದೇವೆ ಎಂದು ಹೇಳಿದರು.

ಸೋಮೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ, ಮಾಜಿ ಸದಸ್ಯರಾದ ಶಿವಾನಂದ, ಅಶೋಕ್ ಕುಂಪಲ, ಗ್ರಾಮ ಪಂಚಾತ್ ಸದಸ್ಯೆ ಕುಮುದ ಅಡಪ, ಬಾಲಕೃಷ್ಣ ಮಂದಿರದ ಉತ್ಸವ ಸಮಿತಿಯ ಗೌರವ ಅಧ್ಯಕ್ಷ ಸೋಮಶೇಕರ್. ಕೆ, ಉಳ್ಳಾಲ ಪುರಸಭೆ ಮಾಜಿ ಸದಸ್ಯ ದಯಾನಂದ, ಮನೋಹರ್, ಸಂತೋಷ್, ಮಂದಿರದ ಪ್ರಮುಖರಾದ ರವೀಂದ್ರ ಕುಂಪಲ, ಪ್ರವೀಣ್ ಎಸ್. ಕುಂಪಲ, ಮಾದವ ಬಂಗೇರ, ನಾಗೇಶ್ ಎಮ್.ಆರ್, ಉಗ್ಗಪ್ಪ ಟೈಲರ್, ವಿಶ್ವನಾಥ ಕುಲಾಲ್, ಚಂದ್ರಶೇಖರ್ .ಬಿ.ಜೆ, ರಾಜೇಶ್ ಬಲ್ಯ ಉಪಸ್ಥಿತರಿದ್ದರು.

Exit mobile version