UN NETWORKS
ಉಳ್ಳಾಲ: ಇಂದಿನ ಕಾಲದಲ್ಲಿ ರಾಮಾಯಣದಂತಹ ಕಥೆಗಳನ್ನು ಹರಿಕಥೆಯ ಮೂಲಕ ತಿಳಿಸುವುದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಉಳಿಸಿ ಬೆಳೆಸಲು ಸಹಕಾರಿ ಎಂದು ಹರಿಕಥಾ ಸತ್ಸಂಗ ಸಮಿತಿಯ ಗೌರವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.
ಪುಂಡರಿಕಾಕ್ಷ ಬೆಳ್ಳೊರು ಮಾತನಾಡಿ ಮನೆ ಮನೆಗೆ ರಾಮಾಯಣ ಮನಮನಕೆ ರಾಮಾಯಣ ಮುಟ್ಟಿಸುವ ಆಮೂಲಕ ರಾಮಾದರ್ಶ ಜೀವನ ಹಾಗೂ ಗ್ರಾಮ ಆದರ್ಶ ಜೀವನ ನಡೆಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು. ಹರಿಕಥಾ ಸತ್ಸಂಗ ಸಮಿತಿ ಅಧ್ಯಕ್ಷ ಹರಿದಾಸ ಮಾಡೂರು ಅಧ್ಯಕ್ಷತೆ ವಹಿಸಿದ್ದರು. ಹರಿಕಥಾ ಮಾಸಚಾರಣೆಯ ಸಮಿತಿ ಪ್ರ. ಕಾರ್ಯದರ್ಶಿ ನಾರಾಯಣ ಕುಂಪಲ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಯತಿರಾಜ್ ಶೆಟ್ಟಿ ವಂದಿಸಿದರು.