UN NETWORKS
ಉಪ್ಪಿನಂಗಡಿ: ಗೃಹರಕ್ಷಕ ದಳ ಉಪ್ಪಿನಂಗಡಿ ಘಟಕ ವಿಪತ್ತು ನಿರ್ವಹಣಾ ತಂಡಕ್ಕೆ ಕಾರ್ಯಚರಣೆ ಮಾಡಲು ಅನುಕೂಲವಾಗುವಂತೆ ನೆರೆ ಸಂದರ್ಭಗಳಲ್ಲಿ ಜನರನ್ನು ಸುಲಭವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ, ಗಾಳಿ ತುಂಬಿಸಿ ಚಲಾವಣೆ ಮಾಡುವ ರಬ್ಬರ್ ಬೋಟನ್ನು ದ.ಕ. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮುರಲೀ ಮೋಹನ್ ಚೂಂತಾರು ರವಿವಾರ, 8-07-2018ರಂದು ಉಪ್ಪಿನಂಗಡಿ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಮತ್ತು ವಿಪತ್ತು ನಿರ್ವಹಣಾ ತಂಡದ ಮುಖ್ಯಾಸ್ಥ ಶ್ರೀ ದಿನೇಶ್ ಇವರಿಗೆ ಹಸ್ತಾಂತರ ಮಾಡಿದರು.
ಸ್ವಯಂಚಾಲಿತ ಯಂತ್ರ ಅಳವಡಿಸಲಾದ ಈ ಬೋಟ್ 3.25 ಲಕ್ಷ ಬೆಲೆ ಬಾಳುತ್ತದೆ. ಇದೇ ಸಂದರ್ಭದಲ್ಲಿ ಬೋಟಿನ ಬಳಕೆಯ ಪ್ರಾತ್ಯಕ್ಷಿತೆಯನ್ನು ನೀಡಲಾಯಿತು. ದೇವಸ್ಥಾನದ ನದಿ ತಡದಲ್ಲಿ ಈ ರಬ್ಬರ್ ಬೋಟ್ ಜನರಿಗೆ ಲಭ್ಯವಿದೆ ಮತ್ತು ಸಾಕಷ್ಟು ಜಾಗರೂಕತೆಯಿಂದ ಈ ಬೋಟನ್ನು ಬಳಸಲು ಡಾ| ಚೂಂತಾರು ಆದೇಶ ನೀಡಿದರು. ಈ ಬೋಟು ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಅಲಿಮಾರ ರಘುನಾಥ ರೈ, ಸದಸ್ಯರಾದ ಬೆಳ್ಳಿಪ್ಪಾಡಿ ಪ್ರಕಾಶ್ ರೈ, ಡಾ| ರಾಜಾರಾಮ ದಂತವೈದ್ಯರು, ಘಟಕಾಧಿಕಾರಿ ದಿನೇಶ್ ಮತ್ತು ಸುಬ್ರಹ್ಮಣ್ಯ ಘಟಕಾಧಿಕಾರಿ ವಿಶ್ವನಾಥ ಉಪಸ್ಥಿತರಿದ್ದರು. ಸ್ಥಳೀಯ ಈಜುಗಾರರು ಮತ್ತು ಮುಳುಗು ತಜ್ಞರಾದ ಚೆನ್ನಪ್ಪ, ಇಸ್ಮಾಯಿಲ್, ಮೊಹಮ್ಮದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.