UN NETWORKS
ಮಂಗಳೂರು:ಯು.ಟಿ.ಖಾದರ್ ಮತ್ತೊಮ್ಮೆ ಕರ್ನಾಟಕ ಸರಕಾರದ ಸಂಪುಟ ದರ್ಜೆಯ ಸಚಿವರಾಗಿರುವುದು ದ.ಕನ್ನಡ, ಉಡುಪಿ, ಕೊಡುಗು ಜಿಲ್ಲೆಗಳ ಅಭಿವೃದ್ಧಿ ಮತ್ತು ಸಾಮರಸ್ಯ ಬಯಸುವ ಜನರ ಗೆಲುವಾಗಿದೆ ಎಂದು ದ.ಕನ್ನಡ ಜಿಲ್ಲಾ ಕಾಂಗ್ರೇಸ್ ವಕ್ತಾರ ಫಾರೂಕ್ ಉಳ್ಳಾಲ್ ವಿಶ್ಲೇಷಿಸಿದ್ದಾರೆ.
ಪಕ್ಷ ಮತ್ತು ನಾಡಿನ ಅಭ್ಯುದಯಕ್ಕೆ ಯುಟಿ ಖಾದರ್, ಅರ್ಹ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ಆರೋಗ್ಯ ಮತ್ತು ಆಹಾರ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ, ಗಳಿಸಿರುವ ಪ್ರಶಂಸೆ, ಅನುಭವ, ಈ ಬಾರಿಯ ‘ಸಮಿಶ್ರ ಸಂಪುಟ’ದಲ್ಲಿ ಮುಕುಟದಂತೆ ಕಂಗೊಳಿಸಲು ಸಹಕಾರಿಯಾಗಲಿದೆ ಎಂದೂ ಫಾರೂಕ್ ಉಳ್ಳಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.