ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಅಕ್ರಮವಾಗಿ ಒಂಭತ್ತು ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿ, ಒಂಭತ್ತು ಜಾನುವಾರು, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಲಾರದ ನಾಸೀರ್ ಬಾಷಾ(32), ಹಾಸನ ಬಾಣಾವರದ ಅಬೂಬಕರ್ ಸಿದ್ದೀಖ್ (28) ಬಂಧಿತರು. ಹೊಸೂರಿನಿಂದ ಕೇರಳ ಕಡೆಗೆ ಟಾಟ-407 ವಾಹನದಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದರು. ಪೊಲೀಸರಿಗೆ ಬಂದ ಮಾಹಿತಿಯಂತೆ ಕೋಟೆಕಾರು ಬಳಿ ಬೆಳಿಗ್ಗೆ 5.30ರ ಸುಮಾರಿಗೆ ವಾಹನ ತಡೆದು ತಪಾಸಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.