UN NETWORKS
ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಮುಂದಿರಿಸಿ ವೋಟು ಪಡೆಯುವ ಷಡ್ಯಂತ್ರ ನಡೆಯುತ್ತಿದೆ . ಆದರೆ ಅಧಿಕಾರ ಬಂದ ತಕ್ಷಣ ಮುಖ್ಯಮಂತ್ರಿ ಪಟ್ಟವನ್ನು ಬೇರೆಯವರಿಗೆ ಕಾಂಗ್ರೆಸ್ ನೀಡಲಿದೆ.
ಕರ್ನಾಟಕ ಕೇರಳ ಗಡಿಭಾಗ ತಲಪಾಡಿಯಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕಚೇರಿ ಮತ್ತು ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಎರಡನೇ ಬಾರಿಗೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆಗುವುದರಲ್ಲಿ ಸಂಶಯವಿದೆ. ಸಿದ್ಧರಾಮಯ್ಯ ಅವರು ಕಾಂಗ್ರೆಸ್ಸಿಗರು ಅನ್ನುವ ಗೌರವವಿಲ್ಲ, ಅಹಿಂದ ವರ್ಗದಿಂದ ಬಂದಿರುವ ನೇತಾರ ಅನ್ನುವ ಕಾರಣಕ್ಕೆ ಗೌರವವಿದೆ. 2018 ರ ಚುನಾವಣೆ ನಡೆದ ನಂತರ ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯ ಅವರಿಗೆ ಅಧಿಕಾರ ಕೊಡುವುದಿಲ್ಲ. ಮತಗಳನ್ನು ಗಳಿಸಲು ಮಾತ್ರ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಬಳಸುತ್ತಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಬೇರೆಯೇ ಇದ್ದಾರೆ ಅನ್ನುವ ಅನುಮಾನವಿದೆ. ಆದರೆ ಒಂದು ವೇಳೆ ಎಸ್ ಡಿಪಿಐ ರಾಜ್ಯದ 5-6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಲ್ಲಿ ಸಿದ್ಧರಾಮಯ್ಯ ಗುಂಪಿಗೆ ಎಸ್ ಡಿಪಿಐ ಖಂಡಿತಾ ಬೆಂಬಲಿಸಲಿದೆ. ಜಾತ್ಯಾತೀತರು, ಸಂಘಪರಿವಾರವನ್ನು ಎದುರುಹಾಕಿಕೊಂಡು ಮಾತನಾಡಿದ ವ್ಯಕ್ತಿ. ಅಲ್ಪಸಂಖ್ಯಾತರ ಸಭೆ ಸಮಾರಂಭಗಳಿಗೆ ಅಲ್ಪಸಂಖ್ಯಾತ ಶಾಸಕರು ಅಡ್ಡಿಬಂದ ಸಂದರ್ಭದಲ್ಲೂ ಅನುಮತಿ ನೀಡಿರುವ ಏಕೈಕ ವ್ಯಕ್ತಿ ಸಿದ್ಧರಾಮಯ್ಯ. ಸಂಘಪರಿವಾರದ ರ್ಯಾಲಿಗಳಿಗೆ ಅಡ್ಡಿಬಂದಂತಹ ವ್ಯಕ್ತಿಯಾಗಿದ್ದಾರೆ. ಸಂಘಪರಿವಾರದ ವೈರತ್ವ ಇಟ್ಟುಕೊಂಡವರೇ ನಿಜವಾದ ಜಾತ್ಯಾತೀತರು. ಕೋಮುವಾದ ನಾಶವಾಗಲು ಪ್ರತಿರೋಧ ಮಾತ್ರವೇ ಸರಿಯಾದ ಮಾರ್ಗ. ಈ ಮೂಲಕವೇ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕೆಂದು ಕರೆ ನೀಡಿದ್ದಾರೆ.
ಒಂದೆಡೆ ರಾಜ್ಯ ರಾಜಕೀಯದಲ್ಲಿ ರಿಯಾಝ್ ಹೇಳಿಕೆ ಗೊಂದಲವನ್ನು ಸೃಷ್ಟಿಸಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಲ್ಪಸಂಖ್ಯಾತರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆಯಲು ಅವರೊಂದಿಗೆ ನಡೆಸಿರುವ ಒಳ ಒಪ್ಪಂದವೇ ಕಾರಣ ಅನ್ನುವ ಹೇಳಿಕೆ ದಾಖಲಿಸಿ ವೀವ್ ಲೈವ್. ಟಿವಿಯಲ್ಲಿ ಪ್ರಸಾರಗೊಂಡಿರುವ ವೀಡಿಯೋ ವೈರಲ್ ಆಗುತ್ತಿದೆ.