UN NETWORKS
ಪಜೀರು: ವ್ಯಕ್ತಿಗತ ಆರೋಗ್ಯ ಸಂರಕ್ಷಣೆ ಸಾಮಾಜಿಕ ಸ್ವಾಸ್ತ್ಯ ಹಾಗೂ ಸಹಬಾಳ್ವೆಗೆ ಪೂರಕ ಎಂದು ಮಂಗಳಾ ಸೇವಾ ಸಮಿತಿ ಟ್ರಸ್ಟ್ನ ಸಂಚಾಲಕ ಡಾ| ಅನಂತಕಷ್ಣ ಭಟ್ ಅಭಿಪ್ರಾಯಪಟ್ಟರು.
ಕುಟುಂಬದ ಸಮಗ್ರ ನೆಮ್ಮದಿಯ ಬುನಾದಿ ನಮ್ಮ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಪಜೀರಿನ ಗೋವನಿತಾಶ್ರಯದಲ್ಲಿ ಸರ್ವಧರ್ಮದ ಜನರಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರ ಒಂದು ಅಂಗ ಆರೋಗ್ಯ ವಿಮಾ ಕಾರ್ಡ್ ವಿತರಣೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು .
ಈ ಸಂದರ್ಭದಲ್ಲಿ ಟ್ರಸ್ಟಿ ಎಲ್. ಶ್ರೀಧರ್ ಭಟ್, ಲಕ್ಷ್ಮೀಶ ಎಡಿಯಾಳ್, ಉಳ್ಳಾಲ ಪ್ರಖಂಡ ವಿಶ್ವ ಹಿಂದೂ ಪರಿಚತ್ ಕಾರ್ಯದರ್ಶಿ ರವಿ ಅಸೈಗೋಳಿ, ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥ ದೇವಸ್ಥಾನದ ಚಂದ್ರಹಾಸ್ ಪೂಂಜಾ ಆಡಳಿತ ಮೊಕ್ತೇಸರ, ಮುಖಂಡರಾದ ಸುಭಾಷ್ ಧರ್ಮನಗರ ಮತ್ತಿತರರು ಉಪಸ್ಥಿತರಿದ್ದರು.