ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಪ್ಪಳ:ಯಾಗ ತರಂಗದಿಂದ ರೋಗತರಂಗ ದೂರವಾಗುತ್ತದೆ. ಹಾಲಿನಲ್ಲಿ ಅಂತರ್ಗತವಾಗಿರುವ ತುಪ್ಪದ ಹಾಗೆ ಭಗವಂತನಿದ್ದಾನೆ. ಅಂತೆಯೇ ಈ ಯಾಗದಿಂದ ಸಮಸ್ತರ ಆಶೋತ್ತರ ಈಡೇರಿಸುವ ಘೃತ ತಯಾರಾಗಲಿ ಎಂದು ಆನೆಗುಂದಿ ಮಹಾಸಂಸ್ಥಾನಮ್ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿ ಶುಭಾಶೀರ್ವಚನ ನೀಡಿದರು.
ಅವರು ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಎರಡನೇ ದಿನದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತಾನಾಡಿದರು.
ಬಳಿಕ ಮಾತನಾಡಿದ ಕೋಝಿಕ್ಕೋಡಿನ ಅದ್ವೈತಾಶ್ರಮದ ಚಿದಾನಂದ ಪುರಿ ಸ್ವಾಮೀಜಿ ಪರಮಾತ್ಮನ ಸಂಕಲ್ಪದಂತೆ ಧರ್ಮ ಸಂಸ್ಥಾಪನೆಯ ಸಂಕಲ್ಪದ ಈ ಯಜ್ಞ ಸಮಸ್ಥ ಕುಟುಂಬಕ್ಕೂ ಒಳಿತನ್ನುಂಟುಮಾಡಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಬಿ, ಪುರಾಣಿಕ್ ಮಾತನಾಡಿ ಕಾಯಕವೇ ಕೈಲಾಸವಾದ ಅಪೂರ್ವ ಸಾಧನಾಶ್ರಮ ಇದಾಗಿದೆ. ಯಜ್ಞಯಾಗಾದಿಗಳು ನಡೆಯುವಲ್ಲಿ ಕೆಟ್ಟ ಅನಿಲ ಪ್ರವೇಶಿಸದೆ ಶುದ್ಧ ವಾತಾವರಣ ನೆಲೆಸಿರುತ್ತದೆ, ಜಗತ್ತಿಗೇ ಶಾಂತಿ ಸಂದೇಶ ನೀಡಿದ ಭಾರತ ಎದ್ದುನಿಲ್ಲಲಿ ಎಂದು ಕರೆಕೊಟ್ಟರು.
ಕೆ.ಟಿ. ಆಳ್ವ, ಸಂಧ್ಯಾ ವಿ. ಶೆಟ್ಟಿ, ಕೃಷ್ಣ ಭಟ್, ಸುಕುಮಾರ ಶೆಟ್ಟಿ, ಡಾ. ರಮೇಶ್ ಬೆಂಗಳೂರು, ಸುರೇಶ್ ಶೆಟ್ಟಿ ಗುರ್ಮೆ,ಮೋನಪ್ಪ ಭಂಡಾರಿ, ಗುರುರಾಜ ಬೈಂದೂರು, ಡಾ. ಆಶಾ ಜ್ಯೋತಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.