UN NETWORKS
ದೇರಳಕಟ್ಟೆ : ಎಸ್.ಎಸ್.ಎಲ್.ಸಿ ಶಿಕ್ಷಣ ಎಂಬುದು ಮಾನವನ ಜೀವನದ ಯಶ್ವಸಿನ ಅತೀ ಪ್ರಾಮುಖ್ಯ ಹಂತ ಶಿಕ್ಷಣವು ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿ ನಿರೂಪಿಸುತ್ತದೆ. ಇಂದಿನ ಔಪಚಾರಿಕ ಶಿಕ್ಷಣದಲ್ಲಿ ,ಪ್ರತಿ ಮನುಷ್ಯನು ಕನಿಷ್ಠ ಪ್ರೌಢ ಶಿಕ್ಷಣವನ್ನದಾರು ಪಡೆಯಲೇಬೇಕು ಪ್ರೌಢ ಶಿಕ್ಷಣದ ಹಂತ ಎಸ್.ಎಸ್.ಎಲ್.ಸಿ ಆಗಿರುತ್ತದೆ .
ಕಾರ್ಯಗಾರವನ್ನು ಉಧ್ಘಾಟಿಸಿದ ಕರ್ನಾಟಕ ಪ್ರೌಢ ಶಿಕ್ಷಣ ನಿರ್ದೇಶಕಾರದ ಫಿಲೋಮಿನ ಲೋಬೋರವರು ಶಿಕ್ಷಣಕ್ಕೆ ತಾರತಮ್ಯವಿಲ್ಲ ಹೆಣ್ಣು ,ಗಂಡು ಎಂಬ ಬೇದಬಾವ ಮಾಡದೆ ಪ್ರೌಢ ಶಿಕ್ಷಣದವರೆಗೆ ಎಲ್ಲರು ಖಡ್ಡಾಯವಾಗಿ ಶಿಕ್ಷಣವನ್ನು ಪಡೆಯಲೇಬೇಕು ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಗಂಡುಮಕ್ಕಳು ಬಹಳ ಹಿಂದುಳಿದಿದ್ದಾರೆ .ಅವರು ಶೈಕ್ಷಣಿಕ ಮುಖ್ಯವಾಹಿನಿಗೆ ಬರಬೇಕು ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನಿರ್ಣಯಕರಾಗಬೇಕೆಂದು ಹೇಳಿದರು .
ಕಾರ್ಯಕ್ರಮದಲ್ಲಿ ಕಣಚೂರು ಅಕಡೆಮಿಕ್ ಆಫ್ ಜನರಲ್ ಎಜ್ಯುಕೇಶನ್ನ ಅಧ್ಯಕ್ಷರಾದ ಹಾಜಿ. ಯು.ಕೆ ಮೋನು ಕಣಚೂರು , ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ , ಕನ್ನೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೋಪೆಸರ್ ಅಬ್ದುಲ್ ರಹ್ಮಾನ್ ,ಡಯೆಟ್ನ ಹಿರಿಯ ಉಪನ್ಯಾಸಕಿ ಸುಮಂಗಳ ಕಣಚೂರ್ ಕಾಲೇಜ್ನ ಪ್ರಾಂಶುಪಾಲರು ಆದ ಹಾಜಿ ಇಕ್ಬಾಲ್ ಅಹಮ್ಮದ್ ಯು.ಟಿ ಉಪಸ್ಥಿತರಿದ್ದರು .
ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕ ಕೋಶಾಧಿಕಾರಿ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು . ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕದ ಕಾರ್ಯದರ್ಶಿ ಎಂ.ಹೆಚ್.ಮಲಾರ್ ವಂದಿಸಿದರು .ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲಮೇನ್ಸಿಯಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಕಣಚೂರು ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿದರು .