UN NETWORKS
ಉಳ್ಳಾಲ: ಉಳ್ಳಾಲ ಬೀಚ್ ಉತ್ಸವ ಉಳ್ಳಾಲದ ಪ್ರತಿಯೊಬ್ಬರ ಉತ್ಸವವೆಂದು ಕೈಜೋಡಿಸಬೇಕಾಗಿದ್ದು, ಸರಕಾರದಿಂದ ಸಿಗುವ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲು ಬದ್ಧ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ಅಬ್ಬಕ್ಕ ಉತ್ಸವವೂ ಕ್ಷೇತ್ರದಲ್ಲಿ ನಡೆಯಲಿದ್ದು, ಉಳ್ಳಾಲ ವ್ಯಾಪ್ತಿಯಲ್ಲಿ ಉತ್ಸವಗಳ ಮೂಲಕ ಉಳ್ಳಾಲದ ಹೆಸರು ದೇಶಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಬೇಕಿದ್ದು, ಈ ಮೂಲಕ ಪ್ರವಾಸಿಗರ ತಾಣವಾಗಿ ಬೆಳೆಯಬೇಕಿದೆ ಎಂದ ಸಚಿವರು ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ದೊರಕಿಸುವುದು ನಗರಸಭೆಯ ಜವಾಬ್ದಾರಿಯಾಗಿದೆ. ಒಂದು ಹಂತದಲ್ಲಿ ಸ್ಥಳೀಯಾಡಳಿತದಲ್ಲಿ ಅನುದಾನಗಳ ಕೊರತೆ ಎದುರಾದಲ್ಲಿ ಶಾಸಕರ ನಿಧಿಯಿಂದ ದೊರಕಿಸಿ ಕೊಡುವ ಭರವಸೆಯನ್ನು ನೀಡಿದರು.
ಈ ಸಂದರ್ಭ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ, ಮೊಗವೀರ ಶಾಲೆ ಹಳೇ ವಿದ್ಯಾರ್ಥಿ ಸಂಘದ ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಾಲ್ಯಾನ್, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಮೊಗವೀರ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಬಂಗೇರ, ಮುಖಂಡ ಬಾಬು ಬಂಗೇರ, ಪೌರಾಯುಕ್ತೆ ವಾಣಿ ಆಳ್ವ, ಪೊಲೀಸ್ ಸಹಾಯಕ ಆಯುಕ್ತ ಕೆ. ರಾಮರಾವ್, ನಗರಸಭೆ ಸದಸ್ಯ ಮೀನಾಕ್ಷಿ ಬಂಗೇರ ಉಪಸ್ಥಿತರಿದ್ದರು.