UN NETWORKS
ಉಳ್ಳಾಲ: ಯುವ ವೈದ್ಯರ ಕೌಶಲ್ಯ ವೃದ್ಧಿಯೊಂದಿಗೆ ಭೌತಚಿಕಿತ್ಸೆ ಅಭಿವೃದ್ಧಿಗೆ ಕಾರ್ಯಗಾರ ಪೂರಕವಾಗಿದೆ ಎಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗ ಮುಖ್ಯಸ್ಥೆ ಡಾ. ಚಾರು ಏಪನ್ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಸಂಸ್ಥೆಯ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಫಿಸಿಯೋಥೆರಪಿಸ್ಟ್ ಗಳು ನಾವೀನ್ಯತೆಯನ್ನು ಹುಡುಕುವುದರ ಜತೆಗೆ ವಿಭಿನ್ನವಾಗಿ ಯೋಚಿಸುವ ಮನಸ್ಥಿತಿಯನ್ನು ಬೆಳೆಸಬೇಕಿದೆ. ವಿಫಲತೆಗಳನ್ನು ಎದುರಿಸಲು ಸಿದ್ಧರಾದಂತೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ ಎಂದರು.
ಡಾ.ಪುರುಷೋತ್ತಮ್ ಚಿಪ್ಪಲ ಉಪಸ್ಥಿತರಿದ್ದರು. ನವದೆಹಲಿಯ ಮನೋವಿಜ್ಞಾನ ಸ¯ಹೆಗಳ ಮಾತುಗಾರ ಅಕ್ಷಯ್ ಅಗರವಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಕ್ಷೇಮ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ| ಧಾನೇಶ್ ಕುಮಾರ್ ಕೆ.ಯು ಸ್ವಾಗತಿಸಿದರು. ಡಾ.ಅಜಯ್ ಥಾಕೂರ್ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ಕೃಷ್ಣ ವಂದಿಸಿದರು.