UN NETWORKS
ಉಳ್ಳಾಲ: ವಾಹನ ದಟ್ಟಣೆ ಜತೆಗೆ ಅಪಘಾತಗಳು ಹೆಚ್ಚುತ್ತಿರುವ ರಸ್ತೆಯಲ್ಲಿ, ಸುರಕ್ಷತೆಯನ್ನು ಗಮನದಲ್ಲಿಟ್ಟು ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ದೇರಳಕಟ್ಟೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ಇನೋಳಿ ಕಂಬ್ಲಪದವು ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರಸ್ತೆವರೆಗಿನ ಅಗಲೀಕರಣ ಕಾಮಗಾರಿಗೆ ನಿಟ್ಟೆ ಆಸ್ಪತ್ರೆ ಎದುರುಗಡೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಸದಸ್ಯರುಗಳಾದ ಕೆ.ಹೆಚ್. ಹಸೈನಾರ್, ಕೆಬೀರ್ ಡಿ., ಸತೀಶ್ ಕುಮಾರ್ , ರಝಾಕ್, ಕರಾವಳಿ ಪ್ರಾಧಿಕಾರದ ನಿರ್ದೇಶಕ ಯೂಸುಫ್ ಬಾವಾ, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಸಂಘಟನಾ ಕಾರ್ಯದರ್ಶಿ ಝಕರಿಯಾ ಮಲಾರ್, ಯುವಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ , ಮಂಜನಾಡಿ ಯುವಕಾಂಗ್ರೆಸ್ ಮುಖಂಡ ಅಶ್ರಫ್ ಕಟ್ಟೆಮಾರ್, ರಫೀಕ್ ಕಲ್ಕಟ್ಟ, ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರ್, ಹಿರಿಯರಾದ ಅಬೂಬಕರ್ , ಮುಖಂಡರುಗಳಾದ ರವಿರಾಜ್ ಶೆಟ್ಟಿ, ಫಾರುಕ್ ಜಿ.ಎನ್, ಇಬ್ರಾಹಿಂ ಬದಿಯಾರ್, ಮಾಜಿ ತಾ.ಪಂ ಸದಸ್ಯ ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.