UN NETWORKS
ಉಳ್ಳಾಲ: ಚರ್ಚ್ ಸೇವೆ ನಡೆಸಲು ವಿಶೇಷ ಪ್ರೀತಿ, ಹಿಂದಿನ ಅವಧಿಯಲ್ಲಿ ನಸುಕಿನ ಜಾವ 4 ಗಂಟೆಯ ತನಕ ಇದ್ದು ರಾಣಿಪುರದ ಚರ್ಚಿನಲ್ಲಿ ಕಾಮಗಾರಿ ನಿರ್ವಹಿಸಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಮುನ್ನೂರು ರಾಣಿಪುರ ಚರ್ಚ್ ವಠಾರಕ್ಕೆ ರೂ. 5 ಲಕ್ಷ ಅನುದಾನದಲ್ಲಿ ಇಂಟರ್ಲಾಕ್ ಅಳವಡಿಕೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ವೇಳೆ ರಾಣಿಪುರ ಚರ್ಚ್ ಧರ್ಮಗುರು ಸಂತೋಷ್ ಡಿಸೋಜಾ, ತಾಲೂಕು ಪಂಚಾಯತ್ ಸದಸ್ಯೆ ವಿಲ್ಮಾ ಡಿಸೋಜ , ಮುನ್ನೂರು ಗ್ರಾ.ಪಂ ಸದಸ್ಯ ವಿಲ್ಫ್ರೆಡ್ , ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಡಿಸೋಜಾ , ಕರಾವಳಿ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯ ಪಿಯೂಷ್ ಮೊಂತೇರೊ , ಮಂಜನಾಡಿ ಯುವಕಾಂಗ್ರೆಸ್ ಮುಖಂಡ ಅಶ್ರಫ್ ಕಟ್ಟೆಮಾರ್, ರಫೀಕ್ ಕಲ್ಕಟ್ಟ, ಮುಂತಾದವರು ಉಪಸ್ಥಿತರಿದ್ದರು.