Site icon Ullalavani

ದೇರಳಕಟ್ಟೆಯಲ್ಲಿ ಮೀಲಾದುನ್ನಬಿ ಕಾರ್ಯಕ್ರಮ ಮತ್ತು ಮೀಲಾದ್ ಫೆಸ್ಟ್ – ೨೦೧೫

ದೇರಳಕಟ್ಟೆ, ಜ.೨೩: ಬದ್ರಿಯಾ ಕೇಂದ್ರ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಹಾಗೂ ಮೀಲಾದ್ ಫೆಸ್ಟ್ ೨೦೧೫ ಕಾರ್ಯಕ್ರಮವು ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಥಳೀಯ ಖತೀಬರಾದ ಬಹು| ಏ.ಒ ಶರೀಫ್ ದಾರಿಮಿಯವರು ಮಾತನಾಡಿ ಪೈಗಂಬರ ಸಂದೇಶವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು, ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ ಎಂಬ ಪ್ರವಾದಿ ನುಡಿಯನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಆಡಂಬರ ಮದುವೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದ್ದು ಆಡಂಬರ ಮದುವೆಯ ಆಮಂತ್ರಣವನ್ನು ಆಯಾ ಜಮಾಅತಿನ ಖತೀಬರಿಗೆ ನೀಡದಿರುವುದೇ ಲೇಸು ಎಂದು ಹೇಳಿದರು. ಆರಂಭದಲ್ಲಿ ಮಸೀದಿ ಗೌರವಾಧ್ಯಕ್ಷರಾದ ಅಬ್ದುಲ್ಲಾ ಹಾಜಿಯವರು ಧ್ವಜಾರೋಹಣಗೈದರು. ನಂತರ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ, ಅರಫಾ ಮದರಸ ಜಲಾಲ್‌ಬಾಗ್ ಹಾಗೂ ಮನಾರುಲ್ ಹುದಾ ಮದರಸ ದೇರಳಕಟ್ಟೆ, ಅರಫಾ ಮದರಸ ಜಲಾಲ್‌ಬಾಗ್ ಹಾಗೂ ಮನಾರುಲ್ ಹುದಾ ಮದರಸ ಗ್ರೀನ್ ಗ್ರೌಂಡ್ ಇಲ್ಲಿನ ಮದರಸ ವಿದ್ಯಾರ್ಥಿಗಳ ಸ್ಕೌಟ್ ಮತ್ತು ದಫ್ ನೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆ ನೇತೃತ್ವವನ್ನು ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಂ ಬಹು| P.ಂ ಮುಹಮ್ಮದಾಲಿ ಫೈಝಿ, ಅರಫಾ ಮದರಸ ಜಲಾಲ್ಬಾಗ್ ಇಲ್ಲಿನ ಸದರ್ ಮುಅಲ್ಲಿಂ ಬಹು| ಅಬೂಬಕ್ಕರ್ ದಾರಿಮಿ ಮತ್ತು ಮನಾರುಲ್ ಹುದಾ ಮದರಸ ಬಹು| ಖಲೀಲುರ್ರಹ್ಮಾನ್ ಅರ್ಶದಿಯವರು ನೀಡಿದರು.


ಮಗ್ರಿಬ್ ನಮಾಝಿನ ಬಳಿಕ ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳಿಂದ ಮೀಲಾದ್ ಫೆಸ್ಟ್ ೨೦೧೫ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಬಳಿಕ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಬಹು| ಸಯ್ಯದ್ ಅಮೀರ್ ತಂಞ್ಙಳ್ ಕಿನ್ಯಾರವರು ದುಆಃ ನೆರವೇರಿದುವ ಮೂಲಕ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿಯವರು ವಹಿಸಿದ್ದರು. ಸ್ಥಳೀಯ ಖತೀಬರಾದ ಬಹು| ಏ.ಒ ಶರೀಫ್ ದಾರಿಮಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಾತಿಥಿಗಳಗಿ ಜಮಾಅತಿನ ಉಪಾಧ್ಯಕ್ಷರುಗಳಾದ. P.ಒ ಅಬ್ದುಲ್ ರಹ್ಮಾನ್ ಹಾಜಿ ಪನೀರ್, ಡಿ. ಅಬ್ಬಾಸ್ ಹಾಜಿ. ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೋಶಾಧಿಕಾರಿ ಅಬೂಬಕ್ಕರ್ ಸ್ವಾಗತ್, ದರ್ಸ್ ಮೇಲ್ವಿಚಾರಕರಾದ ಹಾಜಿ ಮುಹಮ್ಮದಾಲಿ, ಮದರಸ ಮೇಲ್ವಿಚಾರಕರಾದ ಇಬ್ರಾಹಿಂ ಬದ್ಯಾರ್, ಊ.ಊ ಕಂಪೆನಿಯ ಃ ಕುಂಞ್ಞ ಅಹ್ಮದ್, ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಅಹ್ಮದ್ ಸಿರಾಜುದ್ದೀನ್, ದೇರಳಕಟ್ಟೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಕೆ. ಅಬೂಬಕ್ಕರ್ ನಾಟೆಕಲ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷರಾದ ಉಸ್ಮಾನ್ ಡಿ, ಕರ್ನಾಟಕ ಟಿಂಬರ್ ಮಾಲಕರಾದ ಏ.ಒ ಅಬ್ದುಲ್ಲಾ, ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಅಧ್ಯಕ್ಷರಾದ ಹಾಜಿ ಮೊದಿನ್ ಕುಂಞ್ಞಿ ಮರಾಠಿ ಮೂಲೆ, ಮನಾರುಲ್ ಹುದಾ ಮದರಸ ಅಧ್ಯಕ್ಷರಾದ ಸಯ್ಯದಾಲಿ, ಅರಫಾ ಮಸೀದಿ ಅಧ್ಯಕ್ಷರಾದ ಂ.ಂ ಹೈದರ್ ಪರ್ತಿಪಾಡಿ, ಸ್ಥಳೀಯ ಪಂಚಾಯತ್ ಸದಸ್ಯರಾದ ಹಾಜಿ ಕಬೀರ್.ಡಿ, ಉದ್ಯಮಿಗಳಾದ ಮೈಸೂರು ಬಾವ (ಅಬ್ದುಲ್ ಅಝೀಝ್), ಕಣಚೂರು ಮೋನು ಹಾಜಿ, ಡಾ|| ಖಿ.P ಅಹ್ಮದ್ ಕೈರಾಳಿ, ಂ.ಊ ಮಹ್ಮೂದ್ ಹಾಜಿ, ಃ.ಏ ಇಸ್ಮಾಯಿಲ್ ನಾಟೆಕಲ್, ಒ.S ಅಬ್ಬು ಏಷ್ಯನ್, ಉಮರ್ ಫಾರೂಕ್ ಒಐಗಿ ಮಂಜೇಶ್ವರ, ಮುಹಮ್ಮದ್ ರಫೀಕ್ ಇರ್ಫಾನಿ, ಸುಲೈಮಾನ್ ಹನೀಫಿ, ಅಬ್ದುಲ್ ಅಝೀಝ್ ಮೌಲವಿ, ಮೊದಲಾದವರು ಭಾಗವಹಿಸಿದ್ದರು.
ಆರಂಭದಲ್ಲಿ ಜಮಾಅತಿನ ಕಾರ್ಯದರ್ಶಿ I.ಅಬ್ದುಲ್ ಖಾದರ್ ಸ್ವಾಗತಿಸಿದರು, ಮುಅಲ್ಲಿಂ ಬಹು| ಇಬ್ರಾಹಿಂ ಫೈಝಿ ಕಾರ್ಯಕ್ರಮ ನಿರೂಪಿಸಿದರು.

Exit mobile version