UN NETWORKS
ನಾಟೆಕಲ್: ಮಸೀದಿ ಟ್ಯೂಬ್ಲೈಟ್ , ಮನೆಯೊಂದರ ಲೈಟ್ ಮತ್ತು ಮಾಂಸದ ಅಂಗಡಿಗೆ ಹಾನಿಗೈದು ಗಲಭೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪ ನಡೆದಿದ್ದು, ಸಿಸಿಟಿವಿಯಲ್ಲಿ ಸರೆಸಿಕ್ಕ ದೃಶ್ಯದ ಆಧಾರದಲ್ಲಿ ಸುಳ್ಯ ಮೂಲದ ಇಬ್ಬರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಿಗ್ಗೆ ಮಸೀದಿಗೆ ನಮಾಜಿಗೆ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಅಂಗಡಿಯಲ್ಲಿ ಇದ್ದ ಸಿಸಿಟಿವಿಯ ಹಾಡ್ ್ ಡಿಸ್ಕನ್ನು ಪರಿಶೀಲಿಸಿದಾಗ ಇಬ್ಬರ ಕೈವಾಡ ಬೆಳಕಿಗೆ ಬಂದಿದೆ. ಸುಳ್ಯ ಮೂಲದ ಇಬ್ಬರು ದೇರಳಕಟ್ಟೆಯ ವಾಟರ್ ಸಪ್ಲೈನಲ್ಲಿ ಕೆಲಸ ಮಾಡುವವರು ಕೃತ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ. ಅದರಂತೆ ಕೊಣಾಜೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನ ಜಮಾಯಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಗಲಭೆಗೆ ಪ್ರಚೋದನೆ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಾಟೆಕಲ್ ವ್ಯಾಪ್ತಿಯಲ್ಲಿ ಈವರೆಗೂ ಸೌಹಾರ್ದತೆಯನ್ನು ಕೆಡಿಸುವ ಕಾರ್ಯ ಆಗಿರಲಿಲ್ಲ. ಇದೀಗ ದುಷ್ಕೃತ್ಯ ನಡೆಸಲಾಗಿದೆ. ಬಂಧಿತರಾದ ಇಬ್ಬರನ್ನು ಗಡೀಪಾರು ನಡೆಸಬೇಕು ಎಂದು ಎಸ್ ಡಿಪಿ ಐ ಮುಖಂಡ ಹ್ಯಾರೀಸ್ ಮಲಾರ್ ಒತ್ತಾಯಿಸಿದ್ದಾರೆ. ಇಬ್ಬರು ವಿಪರೀತ ಮದ್ಯಸೇವಿಸಿ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ.