Site icon Ullalavani

ತೊಕ್ಕೊಟ್ಟು: ಬಿಜೆಪಿಯಿಂದ ರಸ್ತೆ ತಡೆ

UN NETWORKS

ತೊಕ್ಕೊಟ್ಟು: ಕಾಂಗ್ರೆಸ್ ಸರಕಾರದ ಕಾನೂನಿಂದ ಜಿಲ್ಲೆಯಾದ್ಯಂತ ಅಮಾಯಕ ಜೀವಗಳ ಬಲಿಯಾಗುತ್ತಿದ್ದು, ಈ ಕೂಡಲೇ ಜಿಲ್ಲಾ ಉಸ್ತುವಾರಿ, ಆಹಾರ ಸಚಿವರು ಸೇರಿದಂತೆ ಸುರತ್ಕಲ್, ಮೂಡಬಿದ್ರೆ ಶಾಸಕರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಆಗ್ರಹಿಸಿದ್ದಾರೆ.

ಸುರತ್ಕಲ್ ನಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ಗುರುವಾರ ತೊಕ್ಕೊಟ್ಟುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ನ್ನು ಅರ್ಧ ತಾಸುಗಳವರೆಗೆ ತಡೆ ನಡೆಸಿ ಮಾತನಾಡಿದರು. ಸುರತ್ಕಲ್ ನ ಅಮಾಯಕ ಯುವಕನನ್ನು ಅಮಾನುಷವಾಗಿ ಹತ್ಯೆ ನಡೆಸಲಾಗಿದೆ. ಕಾಂಗ್ರೆಸ್ ಸರಕಾರಕ್ಕೆ ಸ್ವಲ್ಪವಾದರೂ ಕನಿಕರ ಇರುತ್ತಿದ್ದಲ್ಲಿ ಇಂತಹ ಹತ್ಯೆಗಳು ನಡೆಯುತ್ತಿರಲಿಲ್ಲ. ಕಾಂಗ್ರೆಸ್ ಸರಕಾರದ ಕಾನೂನಿಂದಾಗಿ ರಾಜ್ಯಾದ್ಯಂತ ಅಮಾಯಕರ ಹತ್ಯೆಯಾಗುತ್ತಿದೆ. ಯುವಕರ ಜತೆಗೆ ನಿಷ್ಠಾವಂತ ಪೊಲೀಸರ ಮೇಲೆಯೂ ಹತ್ಯೆಗೆ ಯತ್ನಿಸುವಂತಹ ದುಷ್ಕರ್ಮಿಗಳಿಗೆ ಸರಕಾರ ಪ್ರೋತ್ಸಾಹಿಸುತ್ತಿರುವುದು ದುರಾದೃಷ್ಟ ಎಂದ ಅವರು ಜಿಲ್ಲೆಯಾದ್ಯಂತ ನಡೆಯುತ್ತಿರುವ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕಲು ಸಾಧ್ಯವಾಗದ ಇಬ್ಬರು ಶಾಸಕರು , ಉಸ್ತುವಾರಿ ಮತ್ತು ಆಹಾರ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಕ್ಷೇತ್ರ ಉಪಾಧ್ಯಕ್ಷ ಯಶವಂತ ಅಮೀನ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಶ್ರಫ್ ಹರೇಕಳ, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ, ಕೋಟೆಕಾರು ಪಟ್ಟಣ ಪಂ. ಅಧ್ಯಕ್ಷ ಉದಯ ಶೆಟ್ಟಿ ಸೊಳ್ಳೆಂಜೀರು, ಮಹಾಲಕ್ಷ್ಮಿ, ದಿವ್ಯಾ ಶೆಟ್ಟಿ, ಕೋಟೆಕಾರು ಪಟ್ಟಣ ಪಂ,ಸ್ಥಾಯಿ ಸಮಿತಿ ಅಧ್ಯಕ್ಷೆ ಭಾರತಿ ಗಟ್ಟಿ, ಹರಿಯಪ್ಪ ಸಾಲ್ಯಾನ್, ಸುರೇಂದ್ರ ಶೆಟ್ಟಿ, ಜೀವನ್ ಕುಮಾರ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು, ಪ್ರಶಾಂತ್ ಕಾಪಿಕಾಡ್ , ಮಹಮ್ಮದ್ ಅಝ್ಗರ್, ಅಜಿತ್ ಉಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು.

Exit mobile version