UN NETWORKS
ಉಳ್ಳಾಲ:ಭಗವಾನ್ ಶ್ರೀರಾಮನನ್ನು ವರ್ಷಗಳಿಂದ ಕಟಕಟೆಯಲ್ಲಿ ನಿಲ್ಲಿಸುತ್ತಿರುವುದು ಖೇದಕರ ಸಂಗತಿ, ಮತ್ತೆ ವಿಚಾರಣೆಯನ್ನು ಮುಂದೂಡಲು ಪ್ರೇರೇಪಿಸುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ನಂತಹ ಹಿಂದೂ ಜನರೇ ಇದರಲ್ಲಿ ತೊಡಗಿಕೊಂಡಿರುವುದು ಹಿಂದು ಸಮಾಜದ ದುರಾದೃಷ್ಟ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆ ಚಳವಳಿ ದೇಶದ ಇತಿಹಾಸಕ್ಕೆ ಬಹುದೊಡ್ಡ ಸವಾಲಾಗಿದೆ. ದೇಶದ ಹಿತ ಕಾಯುವ ಪಕ್ಷ ಆಡಳಿತಕ್ಕೆ ಬರಲು ಚಳವಳಿಯಿಂದ ಸಾಧ್ಯವಾಗಿದೆ. ಇದೀಗ ಆಡಳಿತ ಕೈಯಲ್ಲಿರುವ ಸಂದರ್ಭ ಅಯೋಧ್ಯೆಯಲ್ಲಿ ಪವಿತ್ರ ರಾಮಜನ್ಮಭೂಮಿ ರಚಿಸಿಯೇ ಸಿದ್ದ. ಅದಕ್ಕಾಗಿ ಹಿಂದು ಸಮಾಜ ಒಗ್ಗಟ್ಟಾಗುವ ನೆಲೆಯಲ್ಲಿ ಇಂತಹ ಕಾರ್ಯಕ್ರಮ ಗಳು ಪೂರಕ. ಇಂತಹ ಶೌರ್ಯ ದಿವಸ್ ಆಚರಣೆ ದೇಶಾದ್ಯಂತ ದೇವಸ್ಥಾನ ಕಟ್ಟಲು ಅಡ್ಡಿಪಡಿಸುತ್ತಿರುವ ಎಲ್ಲರಿಗೂ ಉತ್ತಮ ಸಂದೇಶ ನೀಡಲಿ ಎಂದರು.
ತುಳು ವಿಶ್ಲೇಷಕ ದಯಾನಂದ ಕತ್ತಲಸಾರ್ ಮಾತನಾಡಿ ದೇಶದಲ್ಲಿ ಯುವಸಮುದಾಯ ಆಧುನೀಕತೆಯತ್ತ ವಾಲುತ್ತಿರುವುದರಿಂದ ಜಡತ್ವ ಹೆಚ್ಚಾಗುತ್ತಿದೆ. ದೇಶದಲ್ಲಿ ಹಿಂದೂಗಳಿಗೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಜಾರಿಗೆ ತಂದ ಒಡೆದು ಆಳುವ ನೀತಿ ಈಗಲೂ ಚಾಲ್ತಿಯಲ್ಲಿದೆ. ಆಕ್ಸ್ ಫಡ್ 9 ಡಿಕ್ಷನರಿಯಲ್ಲಿ ಇಂಡಿಯನ್ಸ್ ಅಂದರೆ ದರೋಡೆಕೋರು, ಕಳ್ಳರು ಎಂದು ಉಲ್ಲೇಖವಿದೆ. ಬ್ರಿಟೀಷರು ಇಟ್ಟಂತಹ ಹೆಸರನ್ನೇ ಈಗಲೂ ಪಾಲನೆಯಾಗುತ್ತಿದೆ.
ಆಂಗ್ಲ ಭಾಷೆಯ ವಾಸ್ತವ ಪದಗಳನ್ನು ಅರಿಯುವಂತೆ ಮಾಡಿ ಮಕ್ಕಳನ್ನು ಸರಿದಾರಿಗೆ ತರುವ ಜವಾಬ್ದಾರಿ ಹಿರಿಯ ನಾಗರಿಕರದ್ದಾಗಿದೆ. ಮನೆಯಲ್ಲಿ ಹಟ್ಟಿಯನ್ನು ಇರಿಸದೆ, ಕೋಟ್ಯಂತರ ಬೆಲೆಬಾಳುವ ಮನೆಯನ್ನು ಕಟ್ಟುವವರು ಪ್ರಧಾನಿ ಮೋದಿಯವರು ಹೇಳಿದಂತೆ ಕಪಟ ಗೋಪಾಲಕರೇ ಎಂದು ಸಮರ್ಥಿಸಿಕೊಂಡ ಅವರು ಮೂಢನಂಬಿಕೆ ವಿರೋಧಿ ಕಾನೂನು ಜಾರಿಯಾಗಲೇಬೇಕು ಅಂದರು. ಅಯೋಧ್ಯೆಯಲ್ಲಿ ರಾಮ ದೇವಸ್ಥಾನ ನಿರ್ಮಾಣವಾದಲ್ಲಿನ ದೇಶಕ್ಕೆ ಒಳಿತಾಗಲಿದೆ. ಯಾವ ಧರ್ಮೀಯರು ವಿರೋಧಿಸದೆ ಬೆಂಬಲಿಸಬೇಕಿದೆ ಅಂದ ಅವರು ಟಿಪ್ಪು ಸುಲ್ತಾನನಂತಹ ಪಟಿಂಗರ ಜನ್ಮ ದಿನಾಚರಣೆಯನ್ನು ಆಚರಿಸುವುದು ಮುಸಲ್ಮಾನ ?ರೇಷ್ಟರಿಗೆ ಮಾಡುವ ಅವಮಾನವಾಗಿದ್ದು, ಮುಸಲ್ಮಾನರ ಪವಿತ್ರ ಗ್ರಂಥದಲ್ಲಿಜನ್ಮದಿನವನ್ನು ಆಚರಿಸುವುದೇ ನಿಷಿದ್ಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದು ಮುಖಂಡ ಜಗದೀಶ್ ಆಳ್ವ ಕುವೆತ್ತಬೈಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ರಾಜೇಶ್ ಅಮ್ಟಾಡಿ, ಹಿಂ.ಜಾ.ವೇ ಜಿಲ್ಲಾಸಹಸಂಚಾಲಕ ಸಂದೀಪ್ ಶೆಟ್ಟಿ ಅಂಬ್ಲಮೊಗರು, ಹಿಂ.ಜಾ.ವೇ ಸುರತ್ಕಲ್ ನಗರ ಅಧ್ಯಕ್ಷ ಸತೀಶ್ ಮುಂಚೂರು, ಉದ್ಯಮಿ ಗುರುಪ್ರಸಾದ್, ಹಿಂದು ಮುಖಂಡ ಲೋಕೇಶ್ , ಶ್ರೀ ರಾಮ ಪ್ರಸಾದ್ ಎಕ್ಕೂರು, ವಿಶ್ವನಾಥ ಕೋಡಿಕೆರೆ, ಹಿಂ.ಜಾ.ವೇ ಕುಂಪಲ ಘಟಕ ಅಧ್ಯಕ್ಷ ಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ರಾಜೇಶ್ ಅಮ್ಟಾಡಿ ಇವರನ್ನು ಕುಂಪಲಓಂ ಶಕ್ತಿ ಘಟಕದ ವತಿಯಿಂದ ಸನ್ಮಾನಿಸಲಾಯಿತು
ಮನೋಜ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್ . ಎಸ್. ಕುಂಪಲ ನಿರೂಪಿಸಿದರು. ಮನೋಹರ್ ಗಟ್ಟಿ ವಂದಿಸಿದರು.