Site icon Ullalavani

ಅನುಸ್ಮರಣಾ ಕಾರ್ಯಕ್ರಮ

UN NETWORKS

ಉಳ್ಳಾಲ: ಸಮಕಾಲೀನ ಜಗತ್ತಿನ ಆಧ್ಯಾತ್ಮಿಕ ನಾಯಕ ಸಾತ್ವಿಕ ವಿದ್ವಾಂಸ ಮರ್ಹೂಂ ಪೊಸೋಟ್ ತಙಳ್ ಹಾಗೂ ಇತ್ತೀಚೆಗೆ ನಿಧನರಾದ ಕೆಸಿಎಫ್ ಸಂಸ್ಥಾಪಕ ಸದಸ್ಯ,ಉದಾರಿ,ಸಂಘಟನಾ ಚತುರ ಮರ್ಹೂಂ ಅಬ್ದುರ್ರಹ್ಮಾನ್ ಕೈರಂಗಳ ರವರ ಅನುಸ್ಮರಣಾ ಕಾರ್ಯಕ್ರಮವು ಶರಫುಲ್ ಉಲಮಾ ಪಿ.ಎಂ ಅಬ್ಬಾಸ್ ಉಸ್ತಾದ್ (ಅಲ್ ಮದೀನ) ಇವರ ಅಧ್ಯಕ್ಷತೆಯಲ್ಲಿ ರಿಫಾಯಿ ಮಸ್ಜಿದ್ ಗುಂಡುಕಟ್ಟೆ ವಿದ್ಯಾನಗರದಲ್ಲಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮವನ್ನು ಮೋಯದ್ದೀನ್ ಸಹದಿ ಉದ್ಘಾಟನ ಗೈದರು.ಅಬೂಬಕ್ಕರ್ ಮದನಿ ತೋಟಾಲ್ ಪ್ರಾಸ್ತಾವಿಕ ಭಾಷಣ ಮಾಡಿ ಸಂಘಟನೆ ಪ್ರಯೋಜನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಅನುಸ್ಮರಣಾ ಸಂದೇಶನಗೈದ ಯುವ ವಿದ್ವಾಂಸ ಅಬ್ದುಲ್ಲತೀಫ್ ಸಹದಿ ಅಲ್ ಹಸ್ಸಾ ಅಬ್ದುರ್ರಹ್ಮಾನ್ ಕೈರಂಗಳ ನಡೆದು ಬಂದ ಹಾದಿಯನ್ನು ಕೇಳುಗರ ಮನ ಮುಟ್ಟುವಂತೆ ವಿವರಿಸಿದರು.

ದುಃಅ ಅಶೀರ್ವಚನ ಗೈದ ಸಹ್ಯಿದ್ ಶಹೀರ್ ತಙಳ್ ಅಲ್ ಬುಖಾರಿ ಪೊಸೋಟ್ ಮಾತನಾಡಿ ಅಬ್ದುರ್ರಹ್ಮಾನ್ ಕೈರಂಗಳ ಇಂದು ಜಗತ್ತಿನ ವಿವಿಧ ಕಡೆ ಗುರುತಿಸಿ ಕೊಳ್ಳಲು ಅವರನ್ನು ಸ್ಮರಿಸಲು ಅವರಿಗೆ ಖತಮುಲ್ ಖುರ್’ಹಾನ್ ತಹ್ಲೀಲ್ ಸಮರ್ಪಿಸಲು ಅವರ ಸಂಘಟನಾ ಸೇವೆಯೇ ಕಾರಣ ಎಂದರು.

ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ಪ್ರ.ಕಾರ್ಯದರ್ಶಿ ಸಿ.ಐ.ಇಸ್ಹಾಕ್ ಫಜೀರ್ ಸ್ವಾಗತಿಸಿ.ಎಸ್.ಎಸ್.ಎಫ್ ಡಿ.ಜಿ ಕಟ್ಟೆ ಪ್ರ.ಕಾರ್ಯದರ್ಶಿ
ಜಾಬೀರ್ ಕೈರಂಗಳ ಕಾರ್ಯಕ್ರಮವನ್ನು ನಿರೂಪಿಸಿದರು

Exit mobile version