Site icon Ullalavani

ಜನಸೇವ ಯುವಕ ಮಂಡಲ ಕಾರ್ಯ ಶ್ಲಾಘನೀಯ : ಮೋನು

UN NETWORKS

ಅಂಬ್ಲಮೊಗರು: ತುಳುನಾಡಿನಲ್ಲಿ ಅತಿಥಿ ಗೌರವ ವಿಶಿಷ್ಟ ರೀತಿಯದ್ದಾಗಿದ್ದು, ಜನರ ಸೇವೆಗಾಗಿಯೇ ಹುಟ್ಟಿಕೊಂಡ ಜನಸೇವಾ ಯುವಕ ಮಂಡಲ ಗದ್ದೆಯಲ್ಲಿ ವಿಶೇಷ ಕ್ರೀಡೆ ಅಯೋಜಿಸುವ ಜೊತೆಗೆ ಅತಿಥಿ ಗೌರವದಲ್ಲೂ ವೈಶಿಷ್ಟ್ಯತೆ ಮೆರೆದಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಅಭಿಪ್ರಾಯಪಟ್ಟರು.

ಅಂಬ್ಲಮೊಗರು ಜನಸೇವಾ ಯುವಕ ಮಂಡಲ ಹಾಗೂ ಜಿಲ್ಲಾ ಪಂಚಾಯಿತಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ಭಾನುವಾರ ಅಂಬ್ಲಮೊಗರು ದೋಟೆಮಾರು ಗದ್ದೆಯಲ್ಲಿ ನಡೆದ `ಬಲೇ ಕೆಸರ್‍ಡ್ ಗೊಬ್ಬುಗ’ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನ ಆಚಾರ, ವಿಚಾರ ವಿಭಿನ್ನ, ಇಲ್ಲಿ ಹಿಂದಿನ ಕಾಲದಲ್ಲಿದ್ದ ಕ್ರೀಡಾಕೂಟ ಸಂಸ್ಕøತಿಯ ಪ್ರತೀಕವಾಗಿತ್ತು, ಅದನ್ನು ಉಳಿಸುವ ನಿಟ್ಟಿನಲ್ಲಿ ಗದ್ದೆಗಳಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿ ಎಂದರು.

ಅಂಬ್ಲಮೊಗರು ಪಡ್ಯಾರಮನೆ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ಕೈಕಾಲು, ಶರೀರಕ್ಕೆ ಮಣ್ಣು ಮೆತ್ತಿಕೊಳ್ಳುತ್ತದೆ ಎನ್ನುವ ನೆಪವೊಡ್ಡಿ ಗದ್ದೆಗಿಳಿಯದಿದ್ದಲ್ಲಿ ಇಂದು ನಾವು ಇಷ್ಟೊಂದು ಅಭಿವೃದ್ಧಿ ಹೊಂದಲು ಅಸಾಧ್ಯವಾಗುತ್ತಿತ್ತು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಚರ್ಮರೋಗ ಬಂದ ಸಂದರ್ಭ ಆಂಟಿಬಯೋಟಿಕ್ ಮೊರೆ ಹೋಗುವ ಬದಲು ಮಣ್ಣು ಬಳಕೆಯಿಂದ ರೋಗ ಗುಣವಾಗುತ್ತದೆ, ಇಂದು ಯಾವುದೇ ಉನ್ನತ ಹುದ್ದೆಯಲ್ಲೂ ತೃಪ್ತಿ ಹೊಂದದವರು ಕೃಷಿಯತ್ತ ಮರಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಪ್ರದೀಪ್ ಡಿಸೋಜ, ಉದ್ಯಮಿ ಸತೀಶ್ ಮುಂಚೂರು, ರಾಣಿಪುರ ಚರ್ಚ್ ಪಾಲನಾ ಮಂಡಳಿ ಸದಸ್ಯ ನವೀನ್ ಡಿಸೋಜ, ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್ ಉಚ್ಚಿಲ್, ಕೆಥೊಲಿಕ್ ಸಭಾ ವಲಯಾಧ್ಯಕ್ಷ ಅರುಣ್ ಮೊಂತೆರೋ, ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ಮೊಹಮ್ಮದ್ ರಫೀಕ್, ಚಿತ್ರನಟ ಅರವಿಂದ ಬೋಳಾರ್, ಕೋಟ್ರಗುತ್ತು ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮನಾಭ ರೈ, ಗ್ರಾ.ಪಂ. ಸದಸ್ಯ ದಯಾನಂದ ಶೆಟ್ಟಿ, ಯುವಕ ಮಂಡಲದ ಗೌರವ ಸಲಹೆಗಾರರಾದ ಸಂಜೀವ ಶೆಟ್ಟಿ, ಎ.ವಿಜಯ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ, ಜಯಪ್ರಕಾಶ್ ಶೆಟ್ಟಿ ಮುನ್ನೂರು ಮೊದಲಾದವರು ಉಪಸ್ಥಿತರಿದ್ದರು.

ನಿಧಿಶೆಟ್ಟಿ ಪ್ರಾರ್ಥಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಪಡ್ಡಾಯಿಮನೆ ಸ್ವಾಗತಿಸಿದರು. ಪ್ರ.ಕಾ. ಅನಿಲ್ ಶೆಟ್ಟಿ ವಂದಿಸಿದರು. ಸದಸ್ಯರಾದ ಶ್ಯಾಮ್ ಸುಂದರ್, ಹರೀಶ್ ಅಂಬ್ಲಮೊಗರು ಹಾಗೂ ಲಕ್ಷ್ಮಿನಾರಾಯಣ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Exit mobile version