UN NETWORKS
ಕಿನ್ಯಾ : ಆನ್ಲೈನ್ ಮೂಲಕ ಇರುವ ಸರಕಾರದ ಸವಲತ್ತುಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರಿಗೆ ಕಷ್ಟ ಆಗುವುದನ್ನು ಮನಗಂಡು ಸಚಿವ ಖಾದರ್ ಅವರು ಆದೇಶದ ಹಿನ್ನೆಲೆಯಲ್ಲಿ ಕಿನ್ಯಾ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆದ ಏಕದಿನದ ಆಧಾರ್, ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮತ್ತು ಹೆಸರು ಬದಲಾವಣೆ ಅಭಿಯಾನಕ್ಕೆ ಕಿನ್ಯಾ ಬೆಳರಿಂಗೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಎನ್.ಎಸ್ ಕರೀಂ ಚಾಲನೆ ನೀಡಿದರು.
ಈ ಸಂದರ್ಭ ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯರಾದ ಫಾರೂಕ್ ಕಿನ್ಯ, ಮೋಹಮ್ಮದ್, ಕೆ.ಬಿ ಅಬುಸಾಲಿ, ಕಾಂಗ್ರೆಸ್ ಕಿನ್ಯ ಬ್ಲಾ ಕ್ ಅಧ್ಯಕ್ಷ. ಮೊದ್ದೀನ್ ಕುಂಞ ಮತ್ತಿತರರು ಉಪಸ್ಥಿತರಿದ್ದರು.