Site icon Ullalavani

ವಿಜೃಂಭಣೆಯ ಚತುರ್ಥಿಗೆ ಅದ್ಧೂರಿ ಚಾಲನೆ

ಗಲ್ಲಿಯಿಂದ ಹಿಡಿದು ದಿಲ್ಲಿಯ ವರೆಗೆ ಪ್ರತಿಯೊಂದು ಹಿಂದೂಗಳು ಆಚರಿಸುವ ಸಂಭ್ರಮದ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಎಲ್ಲಾ ಶುಭ ಕಾರ್ಯಗಳಲ್ಲೂ ಮೊದಲ ಪೂಜೆಯನ್ನು ಪಡೆಯುವ ವಿಘ್ನೇಶ್ವರನ್ನು ಈ ದಿನದಂದು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತದೆ. ವರ್ಷಂಪ್ರತಿಯಂತೆ ಈ ಭಾರಿಯು ಕೂಡ ಸಂಭ್ರಮದ ಗೌರಿ ಗಣೇಶ ಹಬ್ಬ ಮತ್ತೆ ಬಂದಿದೆ. ಸಂಬಂಧಗಳ ನಂಟನ್ನು ಗಟ್ಟಿ ಮಾಡುವ ಚತುರ್ಥಿ ಹಬ್ಬ ಆಚರಿಸುವುದೆಂದರೆ ಹಿಂದೂಗಳಿಗೆ ಅದು ಎಲ್ಲಿಲ್ಲದ ಖುಷಿ. ಅದರಲ್ಲೂ ಕೂಡ ಹಬ್ಬಗಳು ಬಂತೆಂದರೆ ಸಾಕು ಸಂಭ್ರಮ ಸಡಗರ ಮನೆಯಲ್ಲಿಯೂ ಮನದಲ್ಲಿಯೂ ಮೂಡಿರುತ್ತದೆ.

ಮೊನ್ನೆ ಮೊನ್ನೆಯಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸವಿಯನ್ನು ಉಂಡ ನಮಗೆ ಅದರ ಬೆನ್ನ ಹಿಂದೆಯೇ ಗೌರಿ-ಗಣೇಶ ಹಬ್ಬ ಬಂದಿರುವುದು ಇನ್ನೊಂದು ಸಡಗರವೇ ಸರಿ. ಅಷ್ಟಮಿಯ ಸಿಹಿ ಮುಗಿಯುತ್ತ ಬರುತ್ತಿದ್ದಂತೆ ಇದೀಗ ಗೌರಿ ಗಣೇಶ ಹಬ್ಬದ ಸಿಹಿ ಉನ್ನಲು ತಯಾರಾಗುತ್ತಿದ್ದೇವೆ.
ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ಮಹತ್ತರವಾದ ಹಬ್ಬವಾಗಿದ್ದು. ಹಿರಿಯರು ಕಿರಿಯರಿಗೆ ಬಹುಮಾನವಾಗಿ ಕೊಟ್ಟು ಹೋದ ಹಬ್ಬವೆಂದರೂ ತಪ್ಪಗಲಾರದು. ಹಬ್ಬಗಳ ಆಚರಣೆಯಿಂದ ಐಕ್ಯತೆಯ ಭಾವನೆ ಮೂಡಿ ಭಾಂದವ್ಯ ವೃದ್ಧಿಸುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 31 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಗಣೇಶನ ಪ್ರತಿಷ್ಠಾಪನೆ ಇಂದು ಬೆಳಿಗ್ಗೆ ನಡೆಯಿತು. ವೇದಮೂರ್ತಿ ಸೋಮೇಶ್ವರ ಶ್ರೀ ಸುಬ್ರಹ್ಮಣ್ಯ ಬಾಶ್ರೀತ್ತಾಯ ಇವರಿಂದ ಗಣೇಶ ವಿಗ್ರಹ ಪ್ರತಿಷ್ಠೆ ನಡೆಯಿತು. ರವೀಂದ್ರ ಕೊಟ್ಟಾರಿ ದೆಕ್ಕಾಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭತ್ತದ ತೆನೆ ಪೂಜೆ ನಡೆದು ನೆರೆದ ನೂರಾರು ಭಕ್ತಾಧಿಗಳಿಗೆ ತೆನೆ ವಿತರಣೆ ನಡೆಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.

ಕೋಟೆಕಾರು ಶ್ರೀ ಶೃಂಗೇರಿ ಮಠದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪನೆಗೊಂಡ ಗೌರಿ-ಗಣೇಶ

ಹಬ್ಬದ ತಯಾರಿ:

ಯಾವುದೇ ಹಬ್ಬವಾದರೂ ಅದಕ್ಕೆ ಸಂಭ್ರಮದ ತಯಾರಿ ಹಬ್ಬದ ಒಂದು ವಾರದ ಮುಂಚೆಯೆ ನಡೆಯುತ್ತಿರುತ್ತದೆ. ಗೌರಿ ಗಣೇಶ ಹಬ್ಬವೆಂದರೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವ ಕಾರಣ ಈ ಹಬ್ಬದ ಸಡಗರ ತುಸು ಜೊರೆ ಎಂದರೆ ತಪ್ಪಗಲಾರದು. ಗೌರಿಯನ್ನು ಮನೆಗೆ ಬರಮಾಡಿಕೊಳ್ಳಲು ಮುತ್ತೈದೆಯರು ಹೊಸ ಬಟ್ಟೆ ಬರೆಗಳನ್ನು ಖರೀದಿಸಿ ಹಬ್ಬದ ದಿನ ಅದನ್ನು ಧರಿಸಿ ದೇವಿಯನ್ನು ಪೂಜೆಯ ಮೂಲಕ ಮನೆಗೆ ಬರಮಾಡಿಕೊಳ್ಳುತ್ತಾರೆ.

ಕಬ್ಬು ತಿನ್ನುವ ಹಬ್ಬ:

ಹಿಂದೂ ಸಂಪ್ರದಾಯದ ಪ್ರಕಾರ ಚತುರ್ಥಿ ಹಬ್ಬವನ್ನು ಗಣೇಶ ಹಬ್ಬ ಎಂದು ಪರಿಗಣಿಸಲಾಗಿದ್ದು ಕಬ್ಬು ಈ ದಿನದ ವಿಶೇಷಗಳಲ್ಲಿ ಒಂದು. ಗಣಪತಿಯ ಶಿರವು ಆನೆಯ ಶಿರವಾದ ಕಾರಣ ಗಜನಾಯಕನನ್ನು ಕಬ್ಬುಗಳಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದಂದು ಪ್ರತಿಯೊಂದು ಮನೆಯಲ್ಲಿಯೂ ಕೂಡ ಕಬ್ಬನ್ನು ತೋರಣವಾಗಿ ಕಟ್ಟುತ್ತಾರೆ. ಅಷ್ಟೇ ಅಲ್ಲದೆ ಕಬ್ಬಿನಿಂದ ಗಣೇಶನನ್ನು ಮಂಟಪವನ್ನು ಅಲಂಕರಿಸುತ್ತಾರೆ. ಮನೆಗಳಿಗೆ ಕಬ್ಬುಗಳನ್ನು ತಮ್ಮ ವಾಹನಗಳಲ್ಲಿ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ತಿಳಿಯುತ್ತದೆ ಈ ಹಬ್ಬಕ್ಕೆ ಕಬ್ಬು ಎಷ್ಟು ಪ್ರಾಮುಖ್ಯವೆಂದು. ಅಷ್ಟೆ ಅಲ್ಲದೆ ನಗರಗಳ ಪ್ರಮುಖ ಬೀದಿಗಳಲ್ಲಿ ಕಬ್ಬುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನು ಕಾಣಬಹುದಾಗಿದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ:

ವಿಘ್ನ ವಿನಾಶಕ ಎಂದೆ ಕರೆಯಲ್ಪಡುವ ಏಕದಂತನಿಗೆ ಯಾವುದೇ ಕಾರ್ಯಕ್ರಮದಲ್ಲಿಯೂ ಕೂಡ ಮೊದಲು ಪೂಜೆ ನಡೆಯಬೇಕು ಎಂಬುವುದು ವಾಡಿಕೆ. ಅದರಂತೆಯೇ ಗಣೇಶ ಹಬ್ಬದಂದು ಪ್ರತಿಯೊಂದು ದೇವಸ್ಥಾನಗಳಲ್ಲಿ ವಿನಾಯಕನಿಗೆ ವಿಶೇಷವಾದ ಪೂಜೆಗಳು ನೆರವೇರುತ್ತದೆ. ಸ್ವರ್ಣ ಗೌರಿ ಹಬ್ಬದಂದೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಶುರುವಾಗುತ್ತದೆ. ಈ ದಿನ ದಂದು ಮನೆಯವರೆಲ್ಲರೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳಲ್ಲಿ ಪಾಲ್ಗೋಳುತ್ತಾರೆ. ಪ್ರತಿಯೊಂದು ದೇವಸ್ಥಾನದಲ್ಲಿಯೂ ಕೂಡ ವಿಶೇಷ ಪೂಜೆಯಿದ್ದು ಲೋಕ ಕಲ್ಯಾಣಕ್ಕಾಗಿ ಗಣೇಶನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ.

ಮನೆಯಲ್ಲಿ ವಿಶಿಷ್ಟ ಭೋಜನ:

ಈ ಹಬ್ಬದಂದು ಪ್ರತಿಯೊಂದು ಹಿಂದೂ ಮನೆಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಈ ಹಬ್ಬದಂದು ಮನೆಯ ಗೃಹಿಣಿಯ ಮುಂಜಾನೆಯೇ ಎದ್ದು ಮನೆಯನ್ನೆಲ್ಲಾ ಗುಡಿಸಿ ಸಾರಿಸಿ ರಂಗೋಲಿಯನ್ನು ಇಡುವ ಮೂಲಕ ಹಬ್ಬದ ತಯಾರಿ ನಡೆಯತ್ತದೆ. ಬಾಂಧವ್ಯಗಳನ್ನು ಬೆಸೆಯುವ ಹಬ್ಬಗಳಾದುದರಿಂದ ಮನೆಯವರೆಲ್ಲರೂ ಸೇರಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆವರು ದಿನವಿಡಿ ಗಣೇಶನನ್ನು ಸ್ತುತಿಸುತ್ತ ವಿಧ ವಿಧವಾದ ಅಡುಗೆಗಳನ್ನು ಮಾಡುತ್ತಾರೆ. ಮನೆಯಲ್ಲಿ ಗಣೇಶನಿಗೆ ಪ್ರಿಯವಾದ ಚಕ್ಕುಲಿ, ಕೊಡುಬಲೆ ಕಜ್ಜಾಯ, ಮೊದಕ, ಲಡ್ಡು ಹೀಗೆ ಹತ್ತು ಹಲವಾರು ರೀತಿಯ ಭಕ್ಷಗಳನ್ನು ತಯಾರಿಸಿ ಗಣಪತಿಗೆ ನೆವೈಧ್ಯವಾಗಿ ಇಟ್ಟರೆ ಇನ್ನು ಕೆಲವರು ಅಂಗಡಿಗಳಲ್ಲಿ ಗಣೇಶ ಹಬ್ಬಕ್ಕೆಂದೆ ವಿಶೇಷವಾಗಿ ತಯಾರಿಸಿದ ಸಿಹಿತಿಂಡಿಗಳನ್ನು ತಂದು ದೇವರಿಗೆ ಬಡಿಸುತ್ತಾರೆ ಗಣಪತಿಯನ್ನು ತಿಂಡಿಬೊಕ ಎಂದು ತಮಾಷೆ ಮಾಡುವುದುಂಟು ಕಾರಣ ಗಣಪತಿಗೆ ಸಿಹಿ ಭಕ್ಷಗಳೆಂದರೆ ಎಲ್ಲಿಲ್ಲದ ಪ್ರೀತಿ ಆದ್ದರಿಂದ ಈ ಹಬ್ಬದಂದು ವಿಶಿಷ್ಟ ಭಕ್ಷಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಕೂರಿಸುವುದು:

ಗಣೇಶ ಹಬ್ಬ ರಾಷ್ಟ್ರೀಯ ಹಬ್ಬವಾದುದರಿಂದ ದೇಶದ ಎಲ್ಲ ಕಡೆಗಳಲ್ಲಿಯೂ ಸಹ ಗಣೇಶ ಹಬ್ಬವನ್ನು ಆಚರಿಸುವುದನ್ನು ಕಾಣುತ್ತೇವೆ. ಅದರಲ್ಲೂ ಸಹ ಮಹಾರಾಷ್ಟ್ರ ಹಾಗೂ ದಕ್ಷಿಣ ಭಾಗಗಳಲ್ಲಿ ಈ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಗಣೇಶ ಹಬ್ಬದಂದು ನಗರದ ಬೀದಿಗಳಲ್ಲಿ ಗಣೇಶ ವಿಗ್ರಹಗಳನ್ನು ಕುಳ್ಳಿರಿಸಿ ವಿವಿಧ ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಸಾರ್ವಜನಿಕರಿಗೆ ಮನೋರಂಜನೆಯನ್ನು ನೀಡುತ್ತಾರೆ. ಸಾರ್ವಜನಿಕವಾಗಿ ಗಣಪತಿಯನ್ನು 3 ಅಥವಾ 7 ದಿನಗಳಲ್ಲಿ ವಿಸರ್ಜಿಸುತ್ತಾರೆ. ಕೆಲವೊಂದು ಮನೆಗಳಲ್ಲಿಯೂ ಕೂಡ ಗಣಪತಿಯ ವಿಗ್ರಹಗಳನ್ನು ಇಡುತ್ತಾರೆ. ಮನೆಯಲ್ಲಿ ಇಟ್ಟ ಗಣಪತಿಯನ್ನು ಅದೇ ದಿನದಂದು ನೀರಿಗೆ ವಿರ್ಸಜಿಸಬೇಕು ಎನ್ನುವುದು ಕೆಲವರ ಮಾತು. ಕೆಲವೊಂದು ಸಂಘ ಸಂಸ್ಥೆಗಳು ಇಡುವ ಗಣಪತಿಯು ಒಂದು ವಾರ ಅಥವಾ ಮೂರು ದಿನಗಳ ನಂತರ ಅತ್ಯಂತ ಸಡಗರಿಂದ ವಿರ್ಸಜಿಸಲಾಗುತ್ತದೆ. ಗಣಪತಿಯ ವಿರ್ಸಜನೆಯನ್ನು ನೋಡಲು ಜನರು ಕ್ಕಿಕ್ಕಿರಿದು ಸೇರುತ್ತಾರೆ.

ಗೌರಿ-ಗಣೇಶ ಹಬ್ಬ ಎರಡನ್ನು ಜತೆಯಲ್ಲಿಯೇ ಆಚರಿಸಲಾಗುತ್ತಿದ್ದು, ಇದು ದೇವರಾಧನೆಯ ಹಬ್ಬವಾದರೂ ಇದರ ಮೂಲತತ್ವ ಸಾಂಸ್ಕ್ರತಿಕ ಹಿನ್ನಲೆಯಿಂದ ಕೂಡಿದೆ. ಯಾವುದೇ ಹಬ್ಬವಾದರೂ ಕೂಡ ಮನೆ ಮಂದಿ ಸೇರಿ ಆಚರಿಸುವುದರೊಂದಿಗೆ ಐಕ್ಯತೆಯ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಇಂದು ನಾವು ಆಚರಿಸುವ ಹಬ್ಬದ ಮುಂದಿನ ನಮ್ಮ ಪೀಳಿಗೆ ಇದರ ಮಹತ್ವ ತಿಳಿಯಬೇಕು. ಹಬ್ಬ ಹರಿದಿನಗಳು ಕೇವಲ ಶೀಕಿಯಾಗದೇ ನಮ್ಮ ಧರ್ಮ ನಮ್ಮ ತನವನ್ನು ಎತ್ತಿ ಇಡಿಯಬೇಕು. ಇದು ನಮ್ಮ ಆಶಯ.

UN NETWORS: SPECIAL  STORY

Exit mobile version