UN NETWORKS
ಮೊಂಟೆಪದವು: ಶ್ರೀ ಕೃಷ್ಣ ಜನಮಾಷ್ಟಮಿ ಪ್ರಯುಕ್ತ ಮುಡಿಪು ಸಮೀಪದ ಮೊಂಟೆಪದವಿನಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಗೆ ಮುಸ್ಲಿಮರು ತಂಪು ಪಾನೀಯ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.
ಪ್ರಸ್ತುತ ಸಂದರ್ಭ ಸಮಾಜದಲ್ಲಿ ಕೋಮುಗಲಭೆಗಳಿಗೆ ಪ್ರಚೋದಿಸುವಂತಹ ಸನ್ನಿವೇಶಗಳೇ ಎದುರಾಗುತ್ತಿವೆ. ಯುವಸಮುದಾಯ ಕೂಡ ಅದರ ಹಿಂದೆಯೇ ಸಾಗಿ ಸಮಾಜದ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಈ ನಡುವೆ ಸೌಹಾರ್ದತೆಯನ್ನು ಉಳಿಸುವ ಸಲುವಾಗಿ ನಡೆದಂತಹ ಕಾರ್ಯಕ್ರಮವಾಗಿದ್ದು, ಮುಸ್ಲಿಂ ಸಮುದಾಯ ಹಿಂದುಗಳ ಜತೆಗಿನ ಹಿಂದಿನ ಬಾಂಧವ್ಯವನ್ನು ಉಳಿಸಬೇಕು, ಶಾಂತಿ, ಸಹಬಾಳ್ವೆಯನ್ನು ನಡೆಸಬೇಕು ಅನ್ನುವ ಸಂದೇಶ ಇಂತಹ ಕಾರ್ಯಕ್ರಮಗಳಿಂದ ಆಗುತ್ತದೆ.
ರಝಾಕ್ ಮೊಂಟೆಪದವು
ಸ್ಥಳೀಯರು