UN NETWORKS
ಉಳ್ಳಾಲ: ಶಾಲೆಗಳಲ್ಲಿ ಸರ್ವಧರ್ಮಗಳ ಆಚರಣೆಯನ್ನು ಆಚರಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಏಕತೆಯ ಸಂದೇಶವನ್ನು ಮೂಡಿಸಲು ಸಾಧ್ಯ ಎಂದು ರತ್ನ ಎಜ್ಯೂಕೇಶನ್ ಟ್ರಸ್ಟ್ ನ ಅಧ್ಯಕ್ಷ ಕೆ.ರವೀಂದ್ರ ರೈ ಉಳಿದೊಟ್ಟು ಅಭಿಪ್ರಾಯಪಟ್ಟರು.ಅವರು ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ರವೀಂದ್ರ ಕಲಾ ವೇದಿಕೆಯಲ್ಲಿ ಶಾಲೆಯ ಸಿರಿಮುಡಿ ತುಳು ಸಂಘ ಶನಿವಾರ ಆಯೋಜಿಸಿದ್ದ ಆಟಿದೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸರ್ವಧರ್ಮಗಳ ಆಚರಣೆಗಳನ್ನು ಶಾಲೆಯ ಸಿರಿಮುಡಿ ತುಳು ಸಂಘ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೂ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದೆ. ಹಿಂದೆ ಕಷ್ಟ ಕಾಲದಲ್ಲಿ ಪ್ರಕೃತಿಯಿಂದ ಸಿಕ್ಕ ಸೊತ್ತುಗಳನ್ನೇ ಉಪಯೋಗಿಸಿಕೊಂಡು ಜನ ಆಹಾರವಾಗಿ ಬಳಸುತ್ತಿದ್ದರು. ಇದೇ ಆಟಿ ತಿಂಗಳ ಆಚರಣೆಯ ಮೂಲಕ ಅದನ್ನು ಸ್ಮರಿಸುವುದರೊಂದಿಗೆ ಮುಮದಿನ ಪೀಳಿಗೆಗೆ ತಿಳಿಸುವ ಕೆಲಸ ನಡೆಯಬೇಕಿದೆ ಎಂದರು.
ವಿದ್ಯಾ ರತ್ನ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ ನಯಿಮ ಹಮೀದ್ ಉಪಸ್ಥಿತರಿದ್ದರು.ರವಿ ಕುಮಾರ್ ಕೋಡಿ ಕಾರ್ಯಕ್ರಮ ಸ್ವಾಗತಿಸಿ ನಿರ್ವಹಿಸಿದರು, ಶಿಕ್ಷಕ ರಮೇಶ್ ವಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರು ವಿವಿಧ ಜಾನಪದ ಕ್ರೀಡೆಗಳಲ್ಲಿ ಭಾಗವಹಿಸುವುದರ ಜತೆಗೆ ಆಟಿ ತಿಂಗಳ ತಿಂಡಿ ತಿನಸುಗಳನ್ನು ಸವಿದರು.