ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಚ್ಚಿಲ: ದೇವಸ್ಥಾನಗಳು ದೈವಸ್ಥಾನಗಳು ಒಂದೇ ಛತ್ರದಡಿ ಬರುವ ಮೂಲಕ ಏಕರೂಪ ನಿರ್ಣಯಗಳನ್ನು ತರುವ ಕಾರ್ಯ ಮಾಗಣೆಗಳ ಮಹಾ ಮಂಡಳಿಯಿಂದ ನಡೆದಾಗ ಹಿಂದೂ ಸಮಾಜಕ್ಕೆ ಸುಭದ್ರವಾದ ಬುನಾದಿ ಹಾಕಲು ಸಹಕಾರಿ ಎಂದು ಎಂದು ಶ್ರೀ ಕ್ಷೇತ್ರ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ದೇವಸ್ಥಾನಗಳಲ್ಲಿ ಆರಾಧನೆ ಸಂಸ್ಕøತಿ ಅವರವರ ಭಾವಕ್ಕೆ ತಕ್ಕಂತೆ ಇರುವುದು ಸಹಜ ಆದರೆ ದೇವಸ್ಥಾನಗಳು ವ್ಯವಾಹಾರಿಕ ತಾಣವಾಗದೆ ಸಮಾಜದ ವಿಚಾರಗಳ ಕಡೆ ಹೆಚ್ಚಿನ ಒಲವು ನೀಡುವ ಕಾರ್ಯದೊಂದಿಗೆ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒಲವು ನೀಡಬೇಕು ಎಂದರು.
ಖ್ಯಾತ ಸಾಹಿತಿ ಹಿರಿಯ ಸಮಾಜಿಕ ಚಿಂತಕ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ಮಾಗಣೆಗಳ ಮಹಾ ಮಂಡಳಿ ಯಾವಾಗಲೂ ಆಗಬೇಕಾದ ಕಾರ್ಯವಾಗಿತ್ತು. ಆದರೆ ತಡವಾಗಿಯಾದರೂ ಒಕ್ಕೂಟ ನಡೆಸುತ್ತಿರುವುದು ಶ್ಲಾಘನೀಯ. ಹಿಂದೂ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜದ ಜಾತಿಯಲ್ಲಿ ಉಪ ಜಾತಿಗಳಿವೆ ಆದರೆ ಹಿಂದೂಗಳಲ್ಲಿ ಮಾತ್ರ ಒಂದು ಬೇರೆ ಬೇರೆ ಜಾತಿಯನ್ನು ಎತ್ತಿಕಟ್ಟುವ ಕಾರ್ಯ ನಡೆಯುತ್ತಿದೆ. ರಾಜಕೀಯದಲ್ಲೂ ಧರ್ಮ ಮತ್ತು ಜಾತೀಯತೆಯ ವಿಚಾರ ಹೆಚ್ಚಿದ್ದು ಖೇದನೀಯ ಎಂದರು.
ಹಿಂದೂ ಸಮಾಜ ಅತ್ಯಂತ ಪ್ರಾಚೀನ ಮತ್ತು ವೈe್ಞÁನಿಕತೆಯನ್ನು ಹೊಂದಿತ್ತು. ಹಿಂದೆ ಪ್ರತಿಯೊಂದು ವಿಚಾರವನ್ನು ಖರಾರುವಕ್ಕಾಗಿ ಪಂಚಾಂಗದಲ್ಲಿ ಮಾಹಿತಿ ನೀಡುತ್ತಿದ್ದರು. ಅದು ಇಂದಿನ ವೈe್ಞÁನಿಕ ಯುಗದಲ್ಲಿ ಸಾಬೀತಾಗಿದೆ ಎಂದ ಅವರು ಹಿಂದೂ ಸಮಾಜದ ಸಂಸ್ಕಾರ ನೀಡುವ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನಗಳನ್ನು ಒಗ್ಗೂಡಿಸುವ ಕಾರ್ಯ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಉತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದರು.
ಮಾಗಣೆಗಳ ಮಹಾ ಮಂಡಳಿಯ ಅಧ್ಯಕ್ಷರಾದ ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮಾತನಾಡಿ ಭಾರತದಲ್ಲಿ ಹಿಂದಿನಿಂದಲೂ ಹಿಂದೂ ಸಮಾಜವನ್ನು ಒಡೆದು ಮತಾಂತರ ಮಾಡುವ ಪ್ರಯತ್ನ ನಡೆದಿದ್ದು, ಮೊಗಲರ ಆಳ್ವಿಕೆ ಸಂದರ್ಭದಲ್ಲಿ ಬ್ರಿಟಷರ ಆಡಳಿತ ಸಂದರ್ಭದಲ್ಲಿ ಪ್ರಯತ್ನಗಳು ನಡೆಯುತ್ತಲೇ ಬಂದಿದೆ. ಆದರೆ ಸುಮಾರು 800 ವರ್ಷಗಳ ಹಿಂದೆ ಇಲ್ಲಿ ಅಕ್ರಮಣ ಮಾಡಿದವರಿಗೆ ಭಾರತವನ್ನು ಮತಾಂತರ ಮಾಡಲು ಸಾಧ್ಯವಾಗಿಲ್ಲ ಯಾಕೆಂದರೆ ನಮ್ಮಲ್ಲಿರುವ ಬಲವಾದ ಸಂಪ್ರದಾಯ, ಕುಟಂಬ ವ್ಯವಸ್ಥೆ, ಗ್ರಾಮ ವ್ಯವಸ್ಥೆ, ಮಾಗಣೆ ವ್ಯವಸ್ಥೆ, ಸೀಮೆ ವ್ಯವಸ್ಥೆ ಮತ್ತು ಪರಸ್ಪರ ಸಹಕಾರ ಇದಕ್ಕೆ ಕಾರಣವಾಗಿದ್ದು,ಹಿಂದೆ ಮೇಲು ಕೀಳೆಂಬದೆ ನಮ್ಮ ವ್ಯವಸ್ಥೆ, ಸಂಪ್ರದಾಯ, ದೇವಸ್ಥಾನ ರಕ್ಷಣೆಗೆ ನಾವು ಕಂಕಣ ಬದ್ಧರಾಗಿದ್ದೆವು. ಆದರೆ ಸ್ವಾತಂತ್ರ್ಯ ನಂತರ ಬ್ರಿಟೀಷರ ಮಾದರಿಯಲ್ಲೇ ಇಸ್ಲಾಮಿಸಂ, ಕಮ್ಯುನಿಸಂ ಹಿಂದೂ ಸಮಾಜವನ್ನು ವಿಭಜಿಸಿ ನಾಶಪಡಿಸುವ ಕಾರ್ಯಗಳಿಗೆ ಕಾರ್ಯಕ್ಕೆ ಕೈ ಹಾಕಿದೆ. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ಇದರೊಂದಿಗೆ ಕಮ್ಯನಿಸಂ ವಿವಿಗಳ ಮೂಲಕ ವೈಚಾರಿಕತೆಯನ್ನು ಬಿತ್ತುವ ಕಾರ್ಯ ಮಾಡುತ್ತಿದ್ದು, ಇದರ ವಿರುದ್ಧ ನಾವು ಜಾಗೃತರಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಗಣೆಗಳ ಮಹಾಮಂಡಳಿ ದುಡಿದ ಹಿರಿಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ರವೀಂದ್ರನಾಥ ಶೆಟ್ಟಿ, ಶ್ರೀ ಸೋಮೇಶ್ವರ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್ ಉಪಸ್ಥಿತರಿದ್ದರು.
ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೋಹನ್ದಾಸ್ ಗಾಂಭೀರ್ ಸ್ವಾಗತಿಸಿದರು. ಉಪ ಕಾರ್ಯದರ್ಶಿ ಸತ್ಯನಾರಾಯಣ ಹೂಡೆ ದೇವಸ್ಥಾನ ದೈವಸ್ಥಾನಗಳ ಮತ್ತು ಸಮುದಾಯಗಳ ಪ್ರತಿನಿ„ಗಳನ್ನು ಪರಿಚಯಿಸಿದರು, ಸದಸ್ಯ ರಾಜೇಶ್ ಶೆಟ್ಟಿ ಪಜೀರುಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿ ಯಶವಂತ ಉಚ್ಚಿಲ್ ವಂದಿಸಿದರು.
* ನಮ್ಮ ಹಿಂದಿನ ಪೂರ್ವಜರು ಹಾಕಿಕೊಟ್ಟ ಮಾಗಣೆಗಳ ಸ್ವರೂಪದಂತೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜವನ್ನು ಒಂದು ಮಾಡುವ ನಿಟ್ಟಿನಲ್ಲಿ ಹಿಂದಿದ್ದ ವ್ಯವಸ್ಥೆಯನ್ನು ಪುನರ್ ನವೀಕರಣ ಮಾಡುವ ಕಾರ್ಯ ಈಗ ಮಾಡಬೇಕಾಗಿದೆ. ಉಳ್ಳಾಲ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ ಐದು ಮಾಗಣೆಗಳ ಎಲ್ಲಾ ಹಿಂದೂ ಸಮುದಾಯಗಳ ಒಕ್ಕೂಟವಾದ `ಮಾಗಣೆಗಳ ಮಹಾ ಮಂಡಳಿ’ಯನ್ನು ಆರಂಭದ ಹಂತದಲ್ಲಿ ಒಟ್ಟು ಸೇರಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳನ್ನು ಸೇರಿಸಲಾಗುವುದು ಈ ಕಾರ್ಯದಲ್ಲಿ ಹಿಂದೂ ಸಮಾಜದ ಎಲ್ಲರ ಸಹಕಾರ ಅಗತ್ಯ
ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು
ಅಧ್ಯಕ್ಷರು, ಮಾಗಣೆಗಳ ಮಹಾ ಮಂಡಳಿ