ಉಳ್ಳಾಲ ನ್ಯೂಸ್ ನೆಟ್ವರ್ಕ್
ತೊಕ್ಕೊಟ್ಟು: ವೃತ್ತಿಯಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಪುರುಷೋತ್ತಮ ಉಳ್ಳಾಲ್(60) ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಹವ್ಯಾಸಿ ಕಲಾವಿದರಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿ ತುಳು ನಾಟಕ ರಂಗಭೂಮಿಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಉತ್ತಮ ದೇಹರ್ದಾಢ್ರ್ಯತೆಯನ್ನು ಹೊಂದಿದ್ದ ಉಳ್ಲಾಲ್ ಅವರಿಗೆ ಖಳನಾಯಕನ ಪಾತ್ರ ಹೆಚ್ಚು ಪ್ರಸಿದ್ಧಿ ಕೊಟ್ಟಿತ್ತು. ಕನ್ನಡದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಚಲನಚಿತ್ರದಲ್ಲಿ ವಜ್ರಮುನಿ ಮಾಡಿದ ಮೂಕಾಸುರ ಪಾತ್ರದಂತೆಯೇ ತುಳು ರಂಗಭೂಮಿಯಲ್ಲಿ ಸಾಕಷ್ಟು ಪ್ರದರ್ಶನ ಕಂಡ `ಅಪ್ಪೆ ಮೂಕಾಂಬಿಕೆ’ ನಾಟಕದಲ್ಲಿ ಉಳ್ಳಾಲ್ ಅವರ ಮೂಕಾಸುರ ಪಾತ್ರ ಬಹಳಷ್ಟು ಹೆಸರು ಕೊಟ್ಟಿತ್ತು. ಪೆÇಲೀಸ್ ಇನ್ಸ್ಪೆಕ್ಟರ್ನಾಯಕ, ಖಳನಾಯಕವೂ ಅವರಿಗೆ ಹೇಳಿಸಿದಂತಿತ್ತು. ಮಾಮುಗಾಂವದಿ ಮಾಮು, ಮರಾಠಿ ನಾಟಕ ಆಧಾರಿತ ಅಸಲ್ ಏರ್ ತುಳು ನಾಟಕದಲ್ಲಿ ರಾಜೇಶ್ ಬಂಟ್ವಾಳ ರ ಪಾತ್ರದಷ್ಟೇ ಮಹತ್ವ ಉಳ್ಳಾಲ್ ಅವರ ಪಾತ್ರ ಪಡೆದಿತ್ತು. ಕೊಡಿಯಾಲ್ಬೈಲ್ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದ ಅವರು `ಒರಿಯರ್ದೊರಿ ಅಸಲ್’ ಹಾಗೂ `ಕಡಲ ಮಗೆ’ ಚಲನಚಿತ್ರದಲ್ಲೂ ನಟಿಸಿದ್ದರು.
ಉಳ್ಳಾಲದ ಬಂಡಿಕೊಟ್ಯ ಶ್ರೀ ಮಲರಾಯ ದೇವಸ್ಥಾನದ ಸಮಿತಿ ಸದಸ್ಯರಾಗಿ, ಬಂಡಿಕೊಟ್ಯ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.