ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ರಭಸ ಹೆಚ್ಚಿದ್ದು, ಮೊಗವೀರಪಟ್ನ,ಕೈಕೋ, ಸುಭಾಷನಗರ , ಸೋಮೇಶ್ವರ, ಉಚ್ಚಿಲ ಭಾಗದಲ್ಲಿರುವ ಸುಮಾರು 50 ಮನೆಗಳಿಗೆ ಅಲೆಗಳು ಬಡಿಯಲು ಆರಂಭಿಸಿದೆ.
ಭಾಗಶ: ಮುಳುಗಡೆಯಾಗಿ ಕಲ್ಲುಗಳೆಡೆಯಲ್ಲಿ ಸಿಲುಕಿರುವ ಬಾರ್ಜ್ನ ಕ್ರೇನ್ ಹೊರತುಪಡಿಸಿ , ಉಳಿದ ಭಾಗಗಳಿಂದ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ.
ಸ್ಥಳಕ್ಕೆ ಸಚಿವರ ಭೇಟಿ: ಕಡಲ್ಕೊರೆತ ಬಾಧಿತ ಪ್ರದೇಶಗಳಿಗೆ ಸಚಿವ ಖಾದರ್ ತಮ್ಮ ಮೂರನೇ ಭೇಟಿಯನ್ನು ಸೋಮವಾರ ನಡೆಸಿದರು. ಈ ವೇಳೆ ಮೊಗವೀರಪಟ್ನದಿಂದ ಉಚ್ಚಿಲವರೆಗೂ ಅಲೆಗಳು ಹೆಚ್ಚಿರುವ ಪ್ರದೇಶಕ್ಕೆ ಶೀಘ್ರವೇ ಕಲ್ಲುಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ಬಿದ್ದವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ನಗರಸಭೆ ವತಿಯಿಂದ ನಡೆಸಲಾಗುವುದು ಎಂದರು.