ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಹೊಟೇಲ್ ಕಾರ್ಮಿಕನೋರ್ವ ಸಹುದ್ಯೋಗಿ ಇಬ್ಬರು ಕಾರ್ಮಿಕರಿಗೆ ಚೂರಿಯಿಂದ ಇರಿದಿರುವ ಘಟನೆ ದೇರಳಕಟ್ಟೆ ಸಮೀಪದ ಶಾಂತಿಭಾಗ್ನ ಖಾಸಗಿ ಲಾಡ್ಜಿನಲ್ಲಿ ಸಂಭವಿಸಿದ್ದು, ಈ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಿಹಾರ ಮೂಲದ ನಿತೇಶ್ (25) ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೋರ್ವ ನೇಪಾಳ ಮೂಲದ ಪ್ರದೀಪ್ (25) ಗಾಯಗೊಂಡಿದ್ದಾನೆ. ಇಬ್ಬರಿಗೆ ಒರಿಸ್ಸಾ ಮೂಲದ ತಾಹಿರ್ ಎಂಬಾತ ಚೂರಿಯಿಂದ ಶನಿವಾರ ಬೆಳಿಗ್ಗೆ ಇರಿದು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಎಸಿಪಿ ಶೃತಿ, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರಣವಿಲ್ಲದೆ ಇಬ್ಬರು ಕಾರ್ಮಿಕರಿಗೆ ಆರೋಪಿ ತಾಹಿರ್ ಚೂರಿಯಿಂದ ಇರಿದಿರುವ ಕುರಿತು ತನಿಖೆ ಆರಂಭಿಸಿದ್ದಾರೆ.