ಉಳ್ಳಾಲ ನ್ಯೂಸ್ ನೆಟ್ವರ್ಕ್
ಇನೋಳಿ: ತಂತ್ರಜ್ಞಾನಗಳಿಂದ ಆಗುತ್ತಿರುವ ಪರಿಣಾಮಗಳು ಆದಾಯಗಳಿಗೂ ಅಡ್ಡಿಯನ್ನು ಉಂಟು ಮಾಡುತ್ತಿದೆ. ಹೊಸತನವನ್ನು ಅಳವಡಿಸದ ಕಂಪೆನಿಗಳು ಕೇವಲ 10-15 ವರ್ಷಗಳಲ್ಲಿ ಮುಚ್ಚಲ್ಪಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಇನ್ಫೋಸಿಸ್ ಮಂಗಳೂರು ಇದರ ಮುಖ್ಯಸ್ಥ ಗೋಪಿಕೃಷ್ಣನ್ ಕೊಣ್ಣನಾಥ್ ಹೇಳಿದ್ದಾರೆ.
1950ರ ಅವಧಿಗಳಲ್ಲಿ ಆರಂಭವಾದ ಕಂಪೆನಿಗಳು 80-90 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಾಚರಿಸಿದರೆ, ಸದ್ಯ ಆರಂಭವಾಗುತ್ತಿರುವ ಕಂಪೆನಿಗಳು 10-15 ವರ್ಷಗಳಲ್ಲೇ ಮುಚ್ಚಿಹೋಗುತ್ತಿವೆ. ಹೊಸತನವನ್ನು ಅಳವಡಿಸದೆ ಕಂಪೆನಿಗಳು ನಷ್ಟ ಹೊಂದುವ ಮೂಲಕ ಮುಚ್ಚುಗಡೆಯಾಗುತ್ತಿದೆ. ತಂತ್ರಜ್ಞಾನಗಳಿಂದ ಆಗುತ್ತಿರುವ ಪರಿಣಾಮಗಳು ಆದಾಯಗಳಿಗೂ ಅಡ್ಡಿಯನ್ನು ಉಂಟು ಮಾಡುತ್ತಿದೆ. ಜ್ಞಾನ ವರ್ಧಿಗೆ ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳ ಜತೆಗೆ ಬೆರೆಯಬೇಕಿದೆ. ಪಾಶ್ರ್ವವಾಗಿ ಚಿಂತಿಸುವ ಮೂಲಕ ಉತ್ಸಾಹದ ಜತೆಗೆ ಜೀವನ ಅನುಸರಿಸಬೇಕಿದೆ. ಸಮಸ್ಯೆಗಳನ್ನು ಅರ್ಥೈಸಿ ಪರಿಹರಿಸುವ ಕೌಶಲ್ಯವನ್ನು ಬೆಳೆಸುವುದರ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನರೇಂದ್ರ ನಾಯಕ್ ಮಾತನಾಡಿ ಆತ್ಮಶಿಸ್ತನ್ನು ಕಾಪಾಡುವುದರೊಂದಿಗೆ ಮನುಷ್ಯ ಶೇ.50 ರಷ್ಟು ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ. ಸಮಾಜದಲ್ಲಿ ಶಿಕ್ಷಣ ಕ್ಷೇತ್ರ ಬಹಳಷ್ಟು ಬೆಳೆದುನಿಂತಿದೆ. ಈ ನಡುವೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವುದರ ಜತೆಗೆ, ಸಮಾಜದ ಚಿಂತನೆಯನ್ನು ನೀಡುವ ಮೂಲಕ ಬೇರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ನುಡಿದಂತೆ ನಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನಡೆಸುವ ಪ್ರಾಜೆಕ್ಟ್ ಕಾರ್ಯಗಳಿಗೆ ಯಶಸ್ವಿ ಕಂಪೆನಿಗಳ ಕುರಿತ ಅಧ್ಯಯನ ನಡೆಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೈಂiÀiದ್ ಮೊಹಮ್ಮದ್ ಬೇರಿ ಮಾತನಾಡಿ 21ನೇ ಶತಮಾನದಲ್ಲಿ ಭಾರತ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇದಕ್ಕೆ ಯುವ ಸಮುದಾಯ ಮಾನವೀಯತೆಂiÀiನ್ನು ಗೌರವಿಸುವ ತತ್ವಗಳನ್ನು ಹೆಚ್ಚು ಪ್ರತಿಪಾದಿಸುತ್ತಾ, ಕರ್ತವ್ಯ ಕ್ಷೇತ್ರದಲ್ಲಿ ಬೆಳೆಯಬೇಕಿದೆ. ಶಿಕ್ಷಣ ಪಡೆದ ಬಳಿಕ ಕೆಲಸವನ್ನು ಹುಡುಕುವವರಾಗದೆ, ಇತರೆ ಜನರಿಗೆ ಕೆಲಸ ಕೊಡುವವರಾಗಿ ಬೆಳೆಯಬೇಕಿದೆ ಎಂದು ಸಲಹೆ ನೀಡಿದರು.
ಬೆಂಗಳೂರು ಲಿಜೆಂಡ್ಸ್ ಮ್ಯೂಸಿಕಲ್ ಗ್ರೂಪಿನ ಖ್ಯಾತ ಗಾಯಕ ಮಸೂದ್ ಆಲಿ ಮುಖ್ಯ ಅತಿಥಿಯಾಗಿದ್ದರು. ಬೆರೀಸ್ ಅಕಾಡೆಮಿ ಆಫ್ ಲರ್ನಿಂಗ್ ಇದರ ಟ್ರಸ್ಟೀ ಮಝರ್ ಬೇರಿ, ಪಾಲಿಟೆಕ್ನಿಕ್ ವಿಭಾಗದ ಪ್ರಾಂಶುಪಾಲ ಡಾ.ಅಝೀಝ್ ಮುಸ್ತಾಫ, ಬೀಡ್ಸ್ ಇದರ ಪ್ರಾಂಶುಪಾಲ ಪ್ರೊ.ಭಾವೇಶ್ ಮೆಹ್ತಾ, ಕಾರ್ಯಕ್ರಮ ಸಂಘಟಕ ಶಮೀಝ್ ಉಪಸ್ಥಿತರಿದ್ದರು.
ಬೆರೀಸ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ಕರೀಂ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿ ಫಹೀಮಾ ಕಾರ್ಯಕ್ರಮ ನಿರ್ವಹಿಸಿದರು ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಪ್ರವೇಶಾತಿ ಮುಖ್ಯಸ್ಥ ಪ್ರೊ.ಮುಸ್ತಾಫ ಬಸ್ತಿಕೋಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಮ್ರನಿಲಾ ವಂದಿಸಿದರು. ಈ ವೇಳೆ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ವಿಭಾಗದಲ್ಲಿ ಉತ್ತಮ ಅಂಕ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.